ADVERTISEMENT

ಬೆಳೆಗಾರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 7:33 IST
Last Updated 28 ನವೆಂಬರ್ 2022, 7:33 IST
ಕಳಸ ತಾಲ್ಲೂಕಿನ ಜೋಗಿಕುಂಬ್ರಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೃಷಿಕ ಶಂಕರೇಗೌಡ.
ಕಳಸ ತಾಲ್ಲೂಕಿನ ಜೋಗಿಕುಂಬ್ರಿ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೃಷಿಕ ಶಂಕರೇಗೌಡ.   

ಕಳಸ: ಸಂಸೆ ಗ್ರಾಮದ ಜೋಗಿಕುಂಬ್ರಿ ಪ್ರದೇಶದ ನಸುಗುಣಿಯ ಅಡಿಕೆ ಬೆಳೆಗಾರ ಶಂಕರೇಗೌಡ(55) ಮನೆಯ ಸಮೀಪದ ಕಾಡಿನಲ್ಲಿ ಭಾನುವಾರ ಮರಕ್ಕೆ ನೇಣು ಬಿಗಿದು ಆತ್ಮಹತ್ಮೆ ಮಾಡಿಕೊಂಡಿದ್ದು, ಅಡಿಕೆ ಎಲೆಚುಕ್ಕಿ ರೋಗದಿಂದ ನೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

4 ಎಕರೆ ಅಡಿಕೆ ತೋಟವು ಎಲೆಚುಕ್ಕಿ ರೋಗದಿಂದ ಬಾಧಿತ ವಾಗಿತ್ತು. ಇದರಿಂದ ನೊಂದಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT