ADVERTISEMENT

ಆಲ್ದೂರು ಸುತ್ತಮುತ್ತ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:11 IST
Last Updated 24 ಸೆಪ್ಟೆಂಬರ್ 2024, 14:11 IST
 ಐದಳ್ಳಿ ಗ್ರಾಮದ ಪ್ರಕಾಶ್ ಎಂಬುವವರ ಮನೆಯ ಗೋಡೆ ಮಳೆಯಿಂದ ಹಾನಿಯಾಗಿ ಕುಸಿದಿರುವುದು
 ಐದಳ್ಳಿ ಗ್ರಾಮದ ಪ್ರಕಾಶ್ ಎಂಬುವವರ ಮನೆಯ ಗೋಡೆ ಮಳೆಯಿಂದ ಹಾನಿಯಾಗಿ ಕುಸಿದಿರುವುದು    

ಆಲ್ದೂರು: ಆವತಿ, ವಸ್ತಾರೆ, ಆಲ್ದೂರು ಹೋಬಳಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ತಡ ರಾತ್ರಿಯಿಂದ ಮಳೆ ಆರಂಭಗೊಂಡಿದ್ದು, ಮಂಗಳವಾರವೂ ಮುಂದುವರಿದಿತ್ತು.

ಮಳೆಯ ಅಬ್ಬರಕ್ಕೆ ಐದಳ್ಳಿ ಗ್ರಾಮದ ಪ್ರಕಾಶ್ ಎಂಬುವವರ ಮನೆಯ ಗೋಡೆಗೆ ಹಾನಿಯಾಗಿ ಕುಸಿದು ಬಿದ್ದಿದೆ.  ಈಗಾಗಲೇ ಕಾಫಿ ಕಾಯಿ ಕಟ್ಟುವಿಕೆ ಮುಗಿಯುತ್ತಾ ಬಂದಿದ್ದು, ಮಳೆ ಮುಂದುವರಿದರೆ ಬೆಳೆಗಾರರು  ನಷ್ಟ ಎದುರಿಸಬೇಕಾಗುತ್ತದೆ ಎಂದು ಕಾಫಿ ಬೆಳೆಗಾರ ರವಿಕುಮಾರ್ ಎಚ್.ಎಲ್. ಹೇಳಿದರು, 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT