ಚಿಕ್ಕಮಗಳೂರು: ಮಳೆಗಾಳಿಗೆ ಮೂಡಿಗೆರೆ ತಾಲ್ಲೂಕಿನ ಕೆ.ತಲಗೂರಿನಲ್ಲಿ ಮಂಗಳವಾರ ರಾತ್ರಿ ಮನೆಯೊಂದರ ಮೇಲೆ ಬೃಹತ್ ವೃಕ್ಷವೊಂದು ಉರುಳಿದೆ. ಮನೆಯೊಳಗೆ ಮಲಗಿದ್ದ ಸರಿತಾ ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಆಸ್ಪತ್ರೆಗೆ ಒಯ್ಯುವಾಗ ಚಂದ್ರಮ್ಮ ಸಾವಿಗೀಡಾಗಿದ್ದಾರೆ.
ಸರಿತಾ(37) ಮತ್ತು ಚಂದ್ರಮ್ಮ (55) ಸಂಬಂಧಿಕರು, ನೆರೆಹೊರೆ ಮನೆಯವರು. ಸರಿತಾ ಅವರಿಗೆ ನಿತಿನ್, ಸುನೀಲ್, ದೀಕ್ಷಿತ್ ಮೂವರು ಮಕ್ಕಳು ಇದ್ದಾರೆ. ಚಂದ್ರಮ್ಮ ಅವರಿಗೆ ಶ್ಯಾಮ್, ನಾರಾಯಣ ಮಕ್ಕಳು ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.