ತರೀಕೆರೆ: ಪಟ್ಟಣದ ಕುಂಬಾರ ಬೀದಿಯಲ್ಲಿ ಕರಕುಶಲ ಕಾರ್ಮಿಕರನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪ್ರಗತಿಯಿಂದ ಸನ್ಮಾನಿಸಲಾಯಿತು.
ಆಶಾ ಬೋಸ್ಲೆ ಅಧ್ಯಕ್ಷತೆ ವಹಿಸಿದ್ದರು. ಕುಶಲಕರ್ಮಿ ರಘುನಂದನ್ ಅವರು, 60 ವರ್ಷದಿಂದ ಮಣ್ಣಿನಲ್ಲಿ ಮಡಿಕೆ, ಗಣಪತಿ, ಕಿರೀಟ, ಮದುವೆಗಳಿಗೆ ಬಾಸಿಂಗ ಮಾಡಿಕೊಡುತ್ತಿದ್ದಾರೆ. ಇಂಥ ಕಲೆಯನ್ನು ಗುರುತಿಸಿ ಗೌರವಿಸಿದ್ದಕ್ಕೆ ಪುಟ್ಟಪ್ಪ, ವನಜಮ್ಮ ರಘುನಂದನ್, ರಮೇಶ್, ಗಂಗಾಧರ್ ಅವರಿಗೆ ಕೃತಜ್ಞತೆ ತಿಳಿಸಿದರು.
ಸಂಸ್ಥೆಯ ಖಜಾಂಚಿ ಯಶೋದಾ ಆಂಜನೇಯ ಮಾತನಾಡಿದರು. ನಾಗಮಣಿ ಹರಳಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.