ಶೃಂಗೇರಿ: ಇಲ್ಲಿನ ನರಸಿಂಹವನದ ಗುರುನಿವಾಸದಲ್ಲಿ ಶೃಂಗೇರಿ ಶಾರದಾ ಪೀಠದ ಗುರುಗಳಾದ ವಿಧುಶೇಖರಭಾರತಿ ಸ್ವಾಮೀಜಿ ಅವರ 32ನೇ ವರ್ಧಂತಿ ಮಹೋತ್ಸವ' ಶುಕ್ರವಾರ ನಡೆಯಿತು.
ವಿಧುಶೇಖರಭಾರತಿ ಸ್ವಾಮೀಜಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ತೋರಣ ಗಣಪತಿ, ಶಕ್ತಿಗಣಪತಿ, ಶಂಕರ ದೇವಾಲಯದಲ್ಲಿ ಪೂಜೆ ನೇರವೆರಿಸಿದರು. ರಾತ್ರಿ ಚಂದ್ರಮೌಳೇಶ್ವರ ಸ್ವಾಮೀಗೆ ವಿಶೇಷ ಪೂಜೆ ಸಲ್ಲಿಸಿದರು. ವರ್ಧಂತಿ ಮಹೋತ್ಸವದ ಸಲುವಾಗಿ ಗುರುನಿವಾಸವನ್ನು ವಿವಿಧ ಪುಷ್ಪಗಳಿಂದ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವಿವಿಧೆಡೆಯಿಂದ ಬಂದಿದ್ದ ಭಕ್ತರು ವಸ್ತ್ರ, ಹಣ್ಣು, ಪುಷ್ಪಕಾಣಿಕೆ ಸಮರ್ಪಿಸಿ ಆಶಿರ್ವಾದ ಪಡೆದರು.
`ಲೋಕಕಲ್ಯಾಣ ಹಾಗೂ ಸನಾತನ ಧರ್ಮದ ಏಳಿಗೆಯೇ ಶಂಕರಾಚಾರ್ಯರ ಉದ್ದೇಶ. ಶಂಕರರು ಲೋಕಕಲ್ಯಾಣಕ್ಕಾಗಿ ಪ್ರತಿ ಕ್ಷಣ ಈಶ್ವರನ ಧ್ಯಾನದಲ್ಲಿರುತ್ತಿದ್ದರು. ಶಂಕರರು ಹೇಳಿದ ತತ್ವಗಳನ್ನು ನಾವೆಲ್ಲರೂ ಆಚರಿಸಿದಾಗ ಮಾತ್ರ ಜ್ಞಾನ ಲಭಿಸಲು ಸಾಧ್ಯ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.