ADVERTISEMENT

ದುರ್ಗಾದೇವಿಗೆ ಹೂವಿನ ಪೂಜೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2022, 6:04 IST
Last Updated 4 ಅಕ್ಟೋಬರ್ 2022, 6:04 IST
ಕಳಸದ ದುರ್ಗಾ ದೇವಿಗೆ ಹೂವಿನ ಪೂಜೆ ಪ್ರಯುಕ್ತ ಆಕರ್ಷಕವಾದ ಅಲಂಕಾರ ಮಾಡಿರುವುದು.
ಕಳಸದ ದುರ್ಗಾ ದೇವಿಗೆ ಹೂವಿನ ಪೂಜೆ ಪ್ರಯುಕ್ತ ಆಕರ್ಷಕವಾದ ಅಲಂಕಾರ ಮಾಡಿರುವುದು.   

ಕಳಸ: ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಿರುವ ಇಲ್ಲಿನ ದುರ್ಗಾದೇವಿಗೆ ಸೋಮವಾರ ವೈಭವದಿಂದ ಹೂವಿನ ಪೂಜೆ ನೆರವೇರಿಸಲಾಯಿತು.

ದೇವಿಯ ಮಂಟಪ ಮತ್ತು ಸುತ್ತಮುತ್ತ ಆಕರ್ಷಕವಾಗಿ ಮಾಡಿರುವ ಹೂವಿನ ಅಲಂಕಾರ ಎಲ್ಲರ ಗಮನ ಸೆಳೆಯಿತು. ದೇವಿಯ ಪ್ರಭಾವಳಿ ಕೂಡ ವಿಶೇಷ ಅಲಂಕಾರದಿಂದ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು.

ದುರ್ಗಾಪೂಜಾ ಸಮಿತಿಯ ಅಧ್ಯಕ್ಷ ರುದ್ರಯ್ಯ ಆಚಾರ್, ಕಾರ್ಯದರ್ಶಿ ನಿರ್ಮಲ್ ಕುಮಾರ್, ಪದಾಧಿಕಾರಿಗಳಾದ ಭರತ್‍ರಾಜ್, ರಾಮಚಂದ್ರ ಹೆಬ್ಬಾರ್, ಭಾಸ್ಕರ್, ಸತೀಶ್, ದಿನೇಶ್, ಉಮೇಶ್, ರಮೇಶ್, ರಾಜೇಶ್, ಮಂಜು, ಪ್ರಶಾಂತ್, ಗೋಪಾಲ್ ಇದ್ದರು. ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.

ADVERTISEMENT

ವಿಜಯದಶಮಿ

ನರಸಿಂಹರಾಜಪುರ: ರಾಗ ಮಯೂರಿ ಅಕಾಡೆಮಿ ಆಶ್ರಯದಲ್ಲಿ ಇದೇ 4ರಂದು ಅಗ್ರಹಾರದ ಅನ್ನಪೂರ್ಣಮ್ಮ ರಂಗನಾಥ್ ರಾವ್ ಸಭಾಂಗಣದಲ್ಲಿ ವಿಜಯದಶಮಿ ಪೂಜೆ ಹಾಗೂ ಕಲಾಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.