ಹೊಸದುರ್ಗ: ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ 40 ಕುರಿ ಮರಿಗಳು ಬಲಿಯಾಗಿವೆ.
ಕಲ್ಕೆರೆಯ ಮಂಜು ಎಂ.ಕೆ. ಅವರು ಕುರಿ ಮೇಯಿಸಲು ಕೊಂಡಜ್ಜಿ ಗ್ರಾಮದ ರವಿಕುಮಾರ್ ಅವರ ತೋಟದಲ್ಲಿ ನೆಲೆಸಿದ್ದರು.
‘ನಿತ್ಯದಂತೆ ಕುರಿ ಮೇಯಿಸಲು ಹೋಗುವಾಗ ಮರಿಗಳನ್ನು ಹಟ್ಟಿಯಲ್ಲಿ ಬಿಟ್ಟು ಹೋಗಿತ್ತೇವೆ. ಬುಧವಾರ ಬೆಳಿಗ್ಗೆ ಮರಿಗಳನ್ನು ಬಿಟ್ಟು ಕುರಿ ಮೇಯಿಸಲು ಹೋಗಿದ್ದಾಗ ಚಿರತೆ ದಾಳಿ ಮಾಡಿದೆ ಎಂದು ಕುರಿಗಾಹಿ ಮಂಜು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.