ಸಿರಿಗೆರೆ: ಶುಕ್ರವಾರ ಹಾಗೂ ಶನಿವಾರ ಸುರಿದ ಮಳೆಗೆ ಸಿರಿಗೆರೆ ಸಮೀಪದ ಬುಕ್ಕರಾಯನ ಕೆರೆ ಕೋಡಿ ಬಿದ್ದಿದೆ.
ಬುಕ್ಕರಾಯನ ಕೆರೆ ತುಂಬಿದರೆ ಸಿರಿಗೆರೆ, ಓಬವ್ವನಾಗ್ತಿಹಳ್ಳಿ,, ಕೋಟೆ, ಚಿಕ್ಕಬೆನ್ನೂರು, ಹಿರೇಬೆನ್ನೂರು, ಲಿಂಗವ್ವನಾಗ್ತಿಹಳ್ಳಿ, ಚೀಳಂಗಿ, ಹಳವುದರ, ಹಳೇರಂಗಾಪುರ ಭಾಗದಲ್ಲಿಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ರೈತರಿಗೆ ಅನುಕೂಲವಾಗಲಿದೆ.
ಕೋಡಿ ಬಿದ್ದ ನೀರು ಹರಿದು ಮತ್ತೆ ಭರಮಸಾಗರ ಕೆರೆಗೆ ಸೇರುತ್ತದೆ.ಗೌಡನ ಕೆರೆಗೂ ತುಂಗಭದ್ರಾ ನೀರು ಪ್ರಯೋಗಾರ್ಥವಾಗಿ ನೀರು ಹರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.