ADVERTISEMENT

ಹಿರಿಯೂರು: ಚೋಳರ ಕಾಲದ ದೇಗುಲ ಜೀರ್ಣೋದ್ಧಾರಕ್ಕೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 14:46 IST
Last Updated 4 ಜನವರಿ 2024, 14:46 IST
ಹಿರಿಯೂರು ತಾಲ್ಲೂಕಿನ ಯರದಕಟ್ಟೆ ಗ್ರಾಮದಲ್ಲಿ ಗುರುವಾರ ಮುಜರಾಯಿ ಇಲಾಖೆಯ ಉಪತಹಶೀಲ್ದಾರ್ ಮಂಜಪ್ಪ ಅಧ್ಯಕ್ಷತೆಯಲ್ಲಿ ಚೋಳರ ಕಾಲದ ಶ್ರೀರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆಂದು ನೂತನ ಸಮಿತಿ ರಚನಾ ಸಭೆ ನಡೆಯಿತು.
ಹಿರಿಯೂರು ತಾಲ್ಲೂಕಿನ ಯರದಕಟ್ಟೆ ಗ್ರಾಮದಲ್ಲಿ ಗುರುವಾರ ಮುಜರಾಯಿ ಇಲಾಖೆಯ ಉಪತಹಶೀಲ್ದಾರ್ ಮಂಜಪ್ಪ ಅಧ್ಯಕ್ಷತೆಯಲ್ಲಿ ಚೋಳರ ಕಾಲದ ಶ್ರೀರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆಂದು ನೂತನ ಸಮಿತಿ ರಚನಾ ಸಭೆ ನಡೆಯಿತು.   

ಹಿರಿಯೂರು: ತಾಲ್ಲೂಕಿನ ಯರದಕಟ್ಟೆ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿರುವ ಮುಜರಾಯಿ ಇಲಾಖೆಗೆ ಸೇರಿರುವ ಇತಿಹಾಸ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಗುರುವಾರ ದೇಗುಲದ ಆವರಣದಲ್ಲಿ ನಡೆದ ಸಭೆಯಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.

ಪ್ರಸನ್ನಕುಮಾರ್ (ಅಧ್ಯಕ್ಷ), ಮಂಜುಪ್ರಸಾದ್ (ಉಪಾಧ್ಯಕ್ಷ), ಅರ್ಚಕ ರಾಮಯ್ಯ, ಕೆ.ತಿಪ್ಪೇಸ್ವಾಮಿ, ಎಚ್.ಸಿದ್ದೇಶ್, ಅನುಸೂಯಮ್ಮ (ನಿರ್ದೇಶಕರು) ಅವರನ್ನು ಆಯ್ಕೆ ಮಾಡಲಾಗಿದೆ.

ಸಮಿತಿ ಆಯ್ಕೆ ಸಭೆಯಲ್ಲಿ ಮುಜರಾಯಿ ಇಲಾಖೆಯ ಉಪತಹಶೀಲ್ದಾರ್ ಮಂಜಪ್ಪ, ಪಂಚಾಯಿತಿ ಕಾರ್ಯದರ್ಶಿ ಗಂಗಾಧರ್, ಹೈಕೋರ್ಟ್ ವಕೀಲ ಮಾರ್ಕಂಡಯ್ಯ, ಗ್ರಾಮದ ಮುಖಂಡರಾದ ಪಲ್ಲಕ್ಕಿ ರಂಗಯ್ಯ, ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ನಾಗರಾಜು, ಕಾಂತೇಗೌಡ, ಹುಚ್ಚರಂಗಪ್ಪ, ಯಶೋಧರ್, ರಂಗಸ್ವಾಮಿ, ನಾಗರಾಜು, ಕರಿಯಪ್ಪ, ನಿಂಗಪ್ಪ, ಹನುಮಂತಪ್ಪ, ಹರೀಶ್, ಚಿದಾನಂದ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.