ADVERTISEMENT

ಹಿರಿಯೂರು: ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿದು ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 4:09 IST
Last Updated 14 ನವೆಂಬರ್ 2021, 4:09 IST
ಜಿಟಿ ಜಿಟಿ ಮಳೆಗೆ ಕುಸಿದ ಗೋಡೆ
ಜಿಟಿ ಜಿಟಿ ಮಳೆಗೆ ಕುಸಿದ ಗೋಡೆ   

ಹಿರಿಯೂರು (ಚಿತ್ರದುರ್ಗ): ಮೂರು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆ ಗೋಡೆ ಕುಸಿದು ಯುವ ದಂಪತಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ.

ಚೆನ್ನಕೇಶವ (26), ಸೌಮ್ಯ (20) ಮೃತ ದಂಪತಿ. ಚೆನ್ನಕೇಶವ ಅವರ ತಂದೆ ಕ್ಯಾತಣ್ಣ (55) ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ಯಾತಣ್ಣ ದಂಪತಿಗೆ ಇಬ್ಬರು ಪುತ್ರರು. ಚಿಕ್ಕಮಗನ ಕುಟುಂಬದೊಂದಿಗೆ ಕ್ಯಾತಣ್ಣ ವಾಸ ಮಾಡುತ್ತಿದ್ದರು. ಮನೆ ಪಕ್ಕದ ಗುಡಿಸಲಿನಲ್ಲಿ ಚೆನ್ನಕೇಶವ ಹಾಗೂ ಸೌಮ್ಯ ಜೀವನ ಕಟ್ಟಿಕೊಂಡಿದ್ದರು. ಭಾನುವಾರ ನಸುಕಿನಲ್ಲಿ ಮನೆಕುಸಿದು ಗುಡಿಸಲಿನ ಮೇಲೆ ಬಿದ್ದು ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ

ADVERTISEMENT

ಐಮಂಗಲ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.