ADVERTISEMENT

ಸುಡುಗಾಡು ಸಿದ್ದರಿಗೆ ಅಗತ್ಯ ವಸ್ತು ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 9:17 IST
Last Updated 2 ಏಪ್ರಿಲ್ 2020, 9:17 IST
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ಸುಡುಗಾಡು ಸಿದ್ದರ ಕಾಲೊನಿಯಲ್ಲಿ ಗಣಪತಿ ಟ್ರಸ್ಟ್‌ನಿಂದ ಅಗತ್ಯ ವಸ್ತು ವಿತರಿಸಲಾಯಿತು
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯ ಸುಡುಗಾಡು ಸಿದ್ದರ ಕಾಲೊನಿಯಲ್ಲಿ ಗಣಪತಿ ಟ್ರಸ್ಟ್‌ನಿಂದ ಅಗತ್ಯ ವಸ್ತು ವಿತರಿಸಲಾಯಿತು   

ಹೊಳಲ್ಕೆರೆ: ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಹಾಗೂ ರಾಮಗಿರಿಯಲ್ಲಿರುವ ಸುಡುಗಾಡು ಸಿದ್ದರಿಗೆ ಬುಧವಾರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

‘ಪ್ರಜಾವಾಣಿ’ಯಲ್ಲಿ ಬುಧವಾರ ‘ತುತ್ತು ಅನ್ನಕ್ಕೂ ಸುಡುಗಾಡು ಸಿದ್ದರ ತತ್ವಾರ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳು ಜನರ ನೆರವಿಗೆ ಧಾವಿಸಿದವು.

ಚಿತ್ರಹಳ್ಳಿ ಗೇಟ್‌ನಲ್ಲಿರುವ ಕಾಲೊನಿಗೆ
ಭೇಟಿ ನೀಡಿದ ತಹಶೀಲ್ದಾರ್ ಕೆ. ನಾಗರಾಜ್, ಗ್ರಾಮ ಪಂಚಾಯಿತಿ ಸಿಬ್ಬಂದಿ, ಅಧಿಕಾರಿಗಳು ಜನರಿಗೆ ದವಸ– ಧಾನ್ಯ, ಅಗತ್ಯ ವಸ್ತುಗಳನ್ನು ವಿತರಿಸಿದರು.

ADVERTISEMENT

ಅಲೆಮಾರಿಗಳ ಸಮಸ್ಯೆ ಆಲಿಸಿದ ಅಲೆಮಾರಿ ಬುಡಕಟ್ಟು ಮಹಾ ಸಭಾದ ರಾಜ್ಯ ಸಮಿತಿ ಸದಸ್ಯರಾದ ಚಿತ್ರದುರ್ಗದ ಸಚಿನ್ ಹಾಗೂ ಎಚ್.ಡಿ.ಪುರದ ಜಯಶೀಲಾ ವಿಜಯ್ ಚಿತ್ರಹಳ್ಳಿ,‘ಈಗಾಗಲೇ ತಾಲ್ಲೂಕು ಹಾಗೂ ಜಿಲ್ಲಾಡಳಿತಗಳಿಂದ ನೆರವು ನೀಡಲಾಗಿದೆ. ಮುಂದೆಯೂ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ರಾಮಗಿರಿಯ ಕಾಲೊನಿಯ 60 ಕುಟುಂಬಗಳಿಗೆ ಪಟ್ಟಣದ ಪ್ರಸನ್ನ ಗಣಪತಿ ಟ್ರಸ್ಟ್‌ನಿಂದ ಅಕ್ಕಿ, ಬೇಳೆ, ಸಕ್ಕರೆ, ಗೋಧಿಹಿಟ್ಟು, ಕಾಫಿಪುಡಿ, ಸಾಂಬರ್ ಪುಡಿ, ಕಾರದಪುಡಿ, ಅರಿಶಿಣ ಪುಡಿ, ಪೇಸ್ಟ್ ಮತ್ತಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಪ್ರಸನ್ನ ಗಣಪತಿ ದೇವಸ್ಥಾನ ಟ್ರಸ್ಟ್‌ನ ನಟರಾಜ್ ಆಚಾರ್, ಎಚ್.ಸಿ.ರಮೇಶ್. ವಿ.ನಟರಾಜ್, ರಾಘವೇಂದ್ರ ನಾಯಕ, ಬಿ.ಎನ್. ಪ್ರಶಾಂತ್ ಕುಮಾರ್, ಎಸ್. ವೇದಮೂರ್ತಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.