ADVERTISEMENT

ಮೊಳಕಾಲ್ಮುರು-ಬಳ್ಳಾರಿ ಬಸ್‌ ಸೇವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 13:48 IST
Last Updated 10 ಜನವರಿ 2019, 13:48 IST
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಗುರುವಾರ ನೂತನ ಬಸ್ ಸೇವೆಯನ್ನು ಶಾಸಕ ಬಿ. ಶ್ರೀರಾಮುಲು ಟಿಕೆಟ್ ಖರೀದಿಸುವ ಮೂಲಕ ಉದ್ಘಾಟಿಸಿದರು
ಮೊಳಕಾಲ್ಮುರು ತಾಲ್ಲೂಕಿನ ರಾಂಪುರದಲ್ಲಿ ಗುರುವಾರ ನೂತನ ಬಸ್ ಸೇವೆಯನ್ನು ಶಾಸಕ ಬಿ. ಶ್ರೀರಾಮುಲು ಟಿಕೆಟ್ ಖರೀದಿಸುವ ಮೂಲಕ ಉದ್ಘಾಟಿಸಿದರು   

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದಲ್ಲಿ ಗುರುವಾರ ಮೊಳಕಾಲ್ಮುರು-ಬಳ್ಳಾರಿ ಬಸ್ ಸೇವೆಯನ್ನು ಶಾಸಕ ಬಿ. ಶ್ರೀರಾಮುಲು ಟಿಕೆಟ್ ಖರೀದಿ ಮಾಡಿ ಸಾಂಕೇತಿಕವಾಗಿ ಪ್ರಯಾಣಿಸುವ ಮೂಲಕ ಉದ್ಘಾಟಿಸಿದರು.

ಈ ಮಾರ್ಗದಲ್ಲಿ ಸಾರ್ವಜನಿಕರು ಓಡಾಡಲು ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲ ಎಂದು ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ನೂತನ ಬಸ್ ಸೇವೆ ಕಲ್ಪಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಿ.ಶ್ರೀರಾಮುಲು ಹೇಳಿದರು.

ಬಿಜೆಪಿ ಮುಖಂಡರಾದ ಜಿಂಕಲು ಬಸವರಾಜ್, ಟಿ. ರೇವಣ್ಣ, ಪರಮೇಶ್ವರಪ್ಪ, ಆರ್.ಜಿ. ಗಂಗಾಧರಪ್ಪ, ಭರತ್ ಕುಮಾರ್, ಎನ್.ವೈ. ಚೇತನ್, ಸೋಮರೆಡ್ಡಿ, ಆರ್.ಜಿ. ಗಂಗಾಧರಪ್ಪ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.