ADVERTISEMENT

ನೇಣು ಬಿಗಿದು ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 6:16 IST
Last Updated 3 ಡಿಸೆಂಬರ್ 2018, 6:16 IST
   

ಚಿತ್ರದುರ್ಗ: ಸಾಲ ಬಾಧೆ ತಾಳಲಾರದೇ ರೈತ ಈರಣ್ಣ (45) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಯಾದಲಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಅನಾರೋಗ್ಯ ಪೀಡಿತ ಪತ್ನಿ ಹಾಗೂ ಕೈಕೊಟ್ಟ ಬೆಳೆ ಹಿನ್ನೆಲೆಯಲ್ಲಿ ಈರಣ್ಣ ಸಾಲಕ್ಕೆ ಸಿಲುಕಿದ್ದರು.

ADVERTISEMENT

ದೊಡ್ಡ ಉಳ್ಳಾರ್ತಿ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ ಮೂರು ಲಕ್ಷ ಸಾಲ ಪಡೆದಿದ್ದರು. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.