ADVERTISEMENT

ಪತ್ರಿಕೆ ವಾಹನ ಚಾಲಕನ ಕುಟುಂಬಕ್ಕೆ ಆರ್ಥಿಕ ನೆರವು

ವಿತರಕರ ಒಕ್ಕೂಟ ಪದಾಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2023, 16:23 IST
Last Updated 25 ಜೂನ್ 2023, 16:23 IST
ಹಿರಿಯೂರಿನ ಪತ್ರಿಕೆ ವಾಹನ ಚಾಲಕ ದಿವಂಗತ ಅರುಣ್ ಕುಮಾರ್ ಮನೆಗೆ ರಾಜ್ಯ ವಿತರಕರ ಒಕ್ಕೂಟ ಮತ್ತು ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಭಾನುವಾರ ಭೇಟಿ ನೀಡಿ ಸಂತಾಪ ಸೂಚಿಸಿ, ಸಹಾಯಧನ ಹಸ್ತಾಂತರಿಸಿದರು
ಹಿರಿಯೂರಿನ ಪತ್ರಿಕೆ ವಾಹನ ಚಾಲಕ ದಿವಂಗತ ಅರುಣ್ ಕುಮಾರ್ ಮನೆಗೆ ರಾಜ್ಯ ವಿತರಕರ ಒಕ್ಕೂಟ ಮತ್ತು ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಭಾನುವಾರ ಭೇಟಿ ನೀಡಿ ಸಂತಾಪ ಸೂಚಿಸಿ, ಸಹಾಯಧನ ಹಸ್ತಾಂತರಿಸಿದರು   

ಹಿರಿಯೂರು: ನಗರದ ಪತ್ರಿಕೆ ವಾಹನ ಚಾಲಕ ದಿವಂಗತ ಅರುಣ್ ಕುಮಾರ್ ಮನೆಗೆ ರಾಜ್ಯ ವಿತರಕರ ಒಕ್ಕೂಟ ಮತ್ತು ಜಿಲ್ಲಾ ಕಾರ್ಯನಿರತ ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಭಾನುವಾರ ಭೇಟಿ ನೀಡಿ ಸಂತಾಪ ಸೂಚಿಸಿದರು. ಸಂಗ್ರಹಿಸಲಾದ ಸಹಾಯಧನವನ್ನು ಮೃತನ ತಂದೆ-ತಾಯಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಆನಂದ್ ಜೈನ್, ಯೋಗೇಶ್, ತುಮಕೂರು ಸಂಘದ ಅಧ್ಯಕ್ಷ ಚೆಲುವರಾಜ್, ಕಾರ್ಯದರ್ಶಿ ವಾಸುದೇವ ನಾದೂರು, ದಾವಣಗೆರೆಯ ಎ.ಎನ್. ಕೃಷ್ಣ, ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ಕುಬೇಂದ್ರಪ್ಪ, ನಾಗರಾಜ್ ಶೆಟ್ಟಿ,ಮೋಹನ್, ಪ್ರಶಾಂತ್, ರಾಜು, ಸುನೀಲ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT