ADVERTISEMENT

ಅಕ್ರಮ ಪಟಾಕಿ ದಾಸ್ತಾನು: ಮಾಲೀಕರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 16:01 IST
Last Updated 26 ಅಕ್ಟೋಬರ್ 2023, 16:01 IST

ಚಳ್ಳಕೆರೆ: ಪರವಾನಗಿ ರಹಿತ ಹಾಗೂ ಸುರಕ್ಷತಾ ಕ್ರಮ ಪಾಲಿಸದೇ ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು ಮಾಡಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ ಪಟಾಕಿ ಬಂಡಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನೆಹರೂ ಸರ್ಕಲ್ ಬಳಿ ಬಳ್ಳಾರಿ ರಸ್ತೆಯ ಗುಪ್ತಸ್ಟೋರ್ ಹಾಗೂ ಬೆಂಗಳೂರು ರಸ್ತೆ ಡಿಟಿಡಿಸಿ ಕೊರಿಯರ್ ಬಳಿ ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿದ್ದ ಮಾಲೀಕರಾದ ತ್ಯಾಗರಾಜ ನಗರದ ಸಿ.ಬಿ.ಆದಿ ಭಾಸ್ಕರಶೆಟ್ಟಿ ಹಾಗೂ ಎಂ.ವಿ.ನಂದರಾಜು ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪಿಎಸ್‍ಐ ಜೆ.ಶಿವರಾಜ್ ಹಾಗೂ ಧರೇಪ್ಪ ಬಾಳಪ್ಪ ದೊಡ್ಡಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT