ADVERTISEMENT

ಕರ್ನಾಟಕ ಗುರಿಯಾಗಿಸಿ ಉಗ್ರರ ದಾಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 7:45 IST
Last Updated 22 ನವೆಂಬರ್ 2022, 7:45 IST
   

ವಿ.ವಿ.ಸಾಗರ (ಚಿತ್ರದುರ್ಗ): ಭಯೋತ್ಪಾದಕರು ಕರ್ನಾಟಕವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉಗ್ರ ಚಟುವಟಿಕೆ ಸಂಪೂರ್ಣ ನಿಗ್ರಹ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಉಗ್ರರ 18ಸ್ಲೀಪರ್ ಸೆಲ್ ಪತ್ತೆ ಮಾಡಿ ಹಲವರನ್ನು ಬಂಧಿಸಲಾಗಿದೆ. ಆದರೂ ಕೆಲವರು ಹೊರ ರಾಜ್ಯದಿಂದ ಬಂದು ದಾಳಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಸಫಲವಾಗುವುದಿಲ್ಲ' ಎಂದು ಹೇಳಿದರು.

'ದೇಶದ ರಕ್ಷಣೆ ದೃಷ್ಟಿಯಿಂದ ಉಗ್ರ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಂಗಳೂರು ಸ್ಫೋಟದ ಆರೋಪಿಯನ್ನು 24 ಗಂಟೆಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಕೃತ್ಯದ ಹಿಂದೆ ಇರುವ ಉಗ್ರ ಸಂಘಟನೆ ಭೇದಿಸಲು ರಾಷ್ಟ್ರೀಯ ತನಿಖಾ ದಳ ಮುಂದಾಗಿದೆ'ಎಂದುಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.