ADVERTISEMENT

ಚಿತ್ರದುರ್ಗ: ದಯಾ ಮರಣಕ್ಕೆ ನಿವೃತ್ತ ಶಿಕ್ಷಕನಿಂದ ಸಿಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 16:41 IST
Last Updated 26 ಸೆಪ್ಟೆಂಬರ್ 2020, 16:41 IST
ಶಿವಣ್ಣ
ಶಿವಣ್ಣ   

ಚಿತ್ರದುರ್ಗ: ‘ನಿವೃತ್ತಿ ನಂತರ ಕನಿಷ್ಠ ಸೌಲಭ್ಯ, ಪಿಂಚಣಿಯೂ ಇಲ್ಲದೆ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು’ ಎಂದು ನಿವೃತ್ತ ಶಿಕ್ಷಕ ಎಂ.ಶಿವಣ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ಇಲ್ಲಿನ ಎಂ.ಕೆ. ಹಟ್ಟಿಯ ಮುರುಘಾರಾಜೇಂದ್ರ ನಗರದ ಅನುದಾನರಹಿತ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ 1992ರಲ್ಲಿ ಸೇವೆಗೆ ಸೇರಿದೆ. ಸತತ 17 ವರ್ಷ ಉಚಿತವಾಗಿ ಸೇವೆ ಸಲ್ಲಿಸಿದ್ದೇನೆ. ನಂತರ 10 ವರ್ಷ ಸರ್ಕಾರದ ವೇತನ ಪಡೆದು 2020ರಲ್ಲಿ ನಿವೃತ್ತಿ ಹೊಂದಿದ್ದೇನೆ. ಆದರೆ, ನಿವೃತ್ತಿ ನಂತರ ಸರ್ಕಾರ ಯಾವುದೇ ಸೌಲಭ್ಯ ನೀಡಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಬದುಕು ಬೀದಿಪಾಲಾಗುವ ಮುನ್ನ ಪಿಂಚಣಿ ನೀಡಬೇಕು. ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.