ADVERTISEMENT

ಚಳ್ಳಕೆರೆ: ಮರಳು ಗಣಿ ಚಟುವಟಿಕೆ ಸ್ಥಗಿತಗೊಳಿಸಿ ಆದೇಶ

ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ–ಗೊರ್ಲತ್ತು ಗ್ರಾಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:30 IST
Last Updated 20 ಏಪ್ರಿಲ್ 2021, 3:30 IST

ಚಳ್ಳಕೆರೆ: ತಾಲ್ಲೂಕಿನ ಕಲಮರಹಳ್ಳಿ ಹಾಗೂ ಗೊರ್ಲತ್ತು ಗ್ರಾಮದ ಬಳಿ ಇರುವ ಮರಳು ಬ್ಲಾಕ್‍ಗಳಲ್ಲಿ ಮರಳು ಸಾಗಾಣಿಕೆ ಸ್ಥಗಿತಗೊಳಿಸಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶಿಸಿದೆ.

ನಿಯಮಾನುಸಾರ ಮರಳು ಗಣಿ ಚಟವಟಿಕೆ ಪುನರ್ ಆರಂಭಿಸಲು ಭೂವಿಜ್ಞಾನ ಇಲಾಖೆ ಕಳೆದ 15ರಂದು ಆದೇಶ ಹೊರಡಿಸಿತ್ತು.

ಇದಕ್ಕೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣ ಮರಳು ಬ್ಲಾಕ್‍ಗಳಲ್ಲಿ ಮರಳು ಸಾಗಾಣಿಕೆ ಮಾಡಲು ಗುತ್ತಿಗೆದಾರರಿಗೆ ನೀಡಿದ್ದ ಆದೇಶವನ್ನು ಇಲಾಖೆ ರದ್ದುಪಡಿಸಿದೆ.

ADVERTISEMENT

‘ತಾಲ್ಲೂಕು ಮರಳು ಸಮಿತಿಯ ನಡಾವಳಿ ಹಾಗೂ ಅಧಿಕಾರಿಗಳ ಜಂಟಿ ತಪಾಸಣಾ ವರದಿಯನ್ನು ಜಿಲ್ಲಾ ಮರಳು ಸಮಿತಿಯಲ್ಲಿ ಚರ್ಚಿಸಬೇಕಿರುವ ಕಾರಣ ಮರಳು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಮರಳು ಗಣಿ ಚಟುವಟಿಕೆಯನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶಿಸಿದೆ’ ಎಂದು ಶಾಸಕ ಟಿ. ರಘುಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.