ADVERTISEMENT

ಗ್ರಹಣ: ದೇವಾಲಯಗಳ ಬಾಗಿಲು ಬಂದ್

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 4:18 IST
Last Updated 26 ಅಕ್ಟೋಬರ್ 2022, 4:18 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯ ಸೂರ್ಯಗ್ರಹಣದ ನಿಮಿತ್ತ ಬಾಗಿಲು ಮುಚ್ಚಿರುವುದು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯ ಸೂರ್ಯಗ್ರಹಣದ ನಿಮಿತ್ತ ಬಾಗಿಲು ಮುಚ್ಚಿರುವುದು.   

ನಾಯಕನಹಟ್ಟಿ: ಸೂರ್ಯಗ್ರಹಣದ ನಿಮಿತ್ತ ಗುರುತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ ಸೇರಿದಂತೆ ಪಟ್ಟಣದ ಎಲ್ಲ ದೇವಾಲಯಗಳು ಮದ್ಯಾಹ್ನದಿಂದ ಸಂಜೆಯವರೆಗೂ ಮುಚ್ಚಿದ್ದವು.

ಗುರುತಿಪ್ಪೇರುದ್ರಸ್ವಾಮಿ ದೇವಾಲಯವು ಜಿಲ್ಲೆಯ ಪ್ರಮುಖ ಆರಾಧನಾ ಕೇಂದ್ರ. ನಿತ್ಯ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೀಪಾವಳಿ ಪ್ರಯುಕ್ತ ಸೋಮವಾರ ಪಟ್ಟಣದ ಹೊರಮಠ ಮತ್ತು ಒಳಮಠಗಳೆರಡಲ್ಲೂ ಭಕ್ತರ ದಂಡೇ ಸೇರಿತ್ತು. ಆದರೆ ಮಂಗಳವಾರ ಕೇತುಗ್ರಸ್ಥ ಸೂರ್ಯಗ್ರಹಣದ ನಿಮಿತ್ತ ಗುರುತಿಪ್ಪೇರುದ್ರಸ್ವಾಮಿ ದೇವಾಲಯಗಳ ಹೊರಮಠ ಮತ್ತು ಒಳಮಠಗಳನ್ನು ಮುಚ್ಚಬೇಕು ಎಂದು ಸರ್ಕಾರವೇ ಆದೇಶ ಹೊರಡಿಸಿದೆ. ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನ ಸೇರಿದಂತೆ ಪಟ್ಟಣದಲ್ಲಿರುವ
ವಿಜಯ ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ಈಶ್ವರ ದೇವಾಲಯ, ಶಾಂತಲಿಂಗೇಶ್ವರ ದೇವಾಳಯ, ಗಣೇಶ ದೇವಾಲಯಗಳು ಬಾಗಿಲು ಮುಚ್ಚಿದ್ದವು.

ಸಂಜೆ 7ಗಂಟೆಯ ನಂತರ ದೇವಾಲಯಗಳಲ್ಲಿ ಸ್ವಚ್ಚತೆಯ ಕಾರ್ಯಗಳು ಭರದಿಂದ ಸಾಗಿದವು. ನಂತರ ರಾತ್ರಿ 8ಕ್ಕೆ ದೇವಾಲಯಗಳಲ್ಲಿ ಗೋಪೂಜೆ ಸೇರಿದಂತೆ ವಿಶೇಷ ಹಲವು ಪೂಜೆ ಕೈಂಕರ್ಯಗಳು ಜರುಗಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.