ಮಂಗಳೂರು: ಅರಬ್ಬಿ ಸಮುದ್ರ ಪಕ್ಷುಬ್ಧಗೊಂಡಿರುವುದರಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಇಲ್ಲಿನ ಹಳೆ ಬಂದರು ಪ್ರದೇಶಕ್ಕೆ ವಾಪಸಾಗಿವೆ.
`ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಮೀನು ಸಿಗುವ ಅವಕಾಶ ಇತ್ತು. ಆದರೆ ಸಮುದ್ರ ಪ್ರಕ್ಷುಬ್ಧಗೊಂಡಿರುವುದರಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರು ಅನಿವಾರ್ಯವಾಗಿ ದಡಕ್ಕೆ ಬರಬೇಕಾಗಿದೆ~ ಎಂದು ಮೀನುಗಾರ ಮುಖಂಡ ವಾಸುದೇವ ಬೋಳಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.