ADVERTISEMENT

ಬಿಸಿಲೆ ಘಾಟಿಯಲ್ಲಿ ಕಾಡಾನೆ ದಾಳಿ: ವಾಹನ ಜಖಂ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 5:11 IST
Last Updated 30 ಅಕ್ಟೋಬರ್ 2018, 5:11 IST
   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಬಿಸಿಲೆ ಘಾಟ್ ರಸ್ತೆಯಲ್ಲಿ ಮಹಿಂದ್ರಾ ಜೀತೋ ವಾಹನದಲ್ಲಿ‌ ತೆರಳುತ್ತಿದ್ದವರ ಮೇಲೆ ಕುಲ್ಕುಂದ ಗೇಟಿನ ಮುಂದಿನ ಮಾರ್ಗ ಮಧ್ಯೆ ಮಂಗಳವಾರ ನಸುಕಿನ ಜಾವ ಕಾಡಾನೆ ದಾಳಿ ನಡೆಸಿದೆ.

ದಾಳಿ ನಡೆಸಿದ ಆನೆಯು ವಾಹನ ಪುಡಿಗೈದು ಹೊರಟು ಹೋಗಿದ್ದು,ವಾಹನದಲ್ಲಿದ್ದ ವ್ಯಕ್ತಿಗಳಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ ನಸುಕಿನಲ್ಲಿ ಸೋಮವಾರ ಪೇಟೆಯ ಮೀನು ವ್ಯಾಪಾರಿಗಳಾದ ಹಮೀದ್ ಮತ್ತು ಅಬ್ದುಲ್ ಸಲಾಂ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.