ADVERTISEMENT

ದಶಲಕ್ಷಣಪರ್ವ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 18:32 IST
Last Updated 6 ಸೆಪ್ಟೆಂಬರ್ 2024, 18:32 IST

ಉಜಿರೆ: ಇಲ್ಲಿನ ಸಿದ್ಧವನ ಗುರುಕುಲದಲ್ಲಿ ಸೆ.8ರಂದು ಸಂಜೆ 6ಗಂಟೆಗೆ ದಶಲಕ್ಷಣಪರ್ವ ನಡೆಯಲಿದೆ. ನಿವೃತ್ತ ಉಪನ್ಯಾಸಕಿ ಪ್ರೊ.ತ್ರಿಶಲಾ ಯು.ಕೆ.ಮಲ್ಲ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದು ಎಸ್‌ಡಿಎಂ ವಸತಿ ನಿಲಯಗಳ ಸಿಇಒ ಪೂರನ್‌ವರ್ಮ ತಿಳಿಸಿದ್ದಾರೆ.

ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಿರಂಜನ ಜೈನ್ ಅಳಿಯೂರು ಧಾರ್ಮಿಕ ಪ್ರವಚನ ನೀಡುವರು.

ವಿಚಾರಸಂಕಿರಣ

ಉಜಿರೆ: ಹಿಂದಿ ಮತ್ತು ದಕ್ಷಿಣ ಭಾರತೀಯ ಭಾಷೆಗಳ ಆಂತರಿಕ ಸಂಬಂಧ ಕುರಿತ ವಿಚಾರಸಂಕಿರಣ ಇಲ್ಲಿನ ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಸೆ.18ರಂದು ನಡೆಯಲಿದೆ ಎಂದು ಹಿಂದಿ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್.ಸತೀಶ್ಚಂದ್ರ ವಿಚಾರಸಂಕಿರಣ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.