ADVERTISEMENT

ಧರ್ಮಸ್ಥಳ ಮೇಳ: ಯಕ್ಷಗಾನ ಸೇವೆ ರದ್ದು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 4:04 IST
Last Updated 27 ಏಪ್ರಿಲ್ 2021, 4:04 IST

ಉಜಿರೆ: ರಾಜ್ಯದಲ್ಲಿ ‘ಕೊರೊನಾ ಕರ್ಫ್ಯೂ’ ಜಾರಿಗೊಳಿಸಿರುವುದರಿಂದ ಧರ್ಮಸ್ಥಳ ಯಕ್ಷಗಾನ ಮಂಡಳಿಯ ಈ ವರ್ಷದ (ಮೇ 24ರ ವರೆಗಿನ) ಎಲ್ಲಾ ಸೇವೆ ಬಯಲಾಟಗಳನ್ನು ರದ್ದುಗೊಳಿಸಲಾಗಿದೆ.

ಮೇ 24 ಹತ್ತನಾವಧಿ ಜಾತ್ರೆ ಬಳಿಕ ಧರ್ಮಸ್ಥಳದಲ್ಲಿ ಮೂರು ದಿನ ಸೇವೆ ಬಯಲಾಟ ಪ್ರದರ್ಶನದ ನಂತರ ಈ ವರ್ಷದ ಬಯಲಾಟ ಸೇವೆ ಮುಕ್ತಾಯಗೊಳ್ಳುತ್ತದೆ. ಮುಂದಿನ ದೀಪಾವಳಿ ನಂತರ ಸೇವೆ ಬಯಲಾಟ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT