ADVERTISEMENT

ತುಳುವಿನಲ್ಲಿ ಧನ್ಯವಾದ ಅರ್ಪಿಸಿದ ಮಂಗಳೂರು ಪೊಲೀಸ್ ಕಮಿಷನರ್ ಡಾ.ಹರ್ಷ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 11:41 IST
Last Updated 28 ಜೂನ್ 2020, 11:41 IST
ಡಾ.ಪಿ.ಎಸ್‌.ಹರ್ಷ
ಡಾ.ಪಿ.ಎಸ್‌.ಹರ್ಷ   

ಮಂಗಳೂರು: ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಇದೀಗ ವರ್ಗಾವಣೆಯಾಗಿದ್ದು, ಟ್ವಿಟರ್‌ನಲ್ಲಿ ತುಳುವಿನಲ್ಲಿಯೇ ಮಂಗಳೂರಿನ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.

‘ಕುಡ್ಲದ ಮಾತ ಮೋಕೆದ ಬಂಧುಲೇ, 11 ತಿಂಗೊಳುರ್ದ್‌ ಕುಡ್ಲದ ಪೊಲೀಸ್ ಆಯುಕ್ತೆಯಾದ್‌ ಸೇವೆ ಮಂದಿನ ಎಂಕ ಇತ್ತೆ ವರ್ಗಾವಣೆ ಅವೋಂದುಂಡು. ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಮಸ್ತ್‌ ಪ್ರಾಮಾಣಿಕ ಬೊಕ್ಕ ಜನಪರವಾದು ಎನ್ನ ಕರ್ತವ್ಯ ಮಲ್ತೊಂದು ಬೈದೆ. ಎಂಕ್‌ ಸಹಕಾರ ಬೆಂಬಲ ಕೊರ್ನ ಮಾತೆರೆಗ್ಲಾ ಉಡಲ್‌ ದಿಂಜಿನ ಸೊಲ್ಮೆಲು’ (ಕುಡ್ಲದ ಬಂಧುಗಳೇ, 11 ತಿಂಗಳಿಂದ ಮಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಸೇವೆ ಸಲ್ಲಿಸಿ, ಇದೀಗ ವರ್ಗಾವಣೆ ಆಗಿದ್ದೇನೆ. ಇಲಾಖೆಯ ಸಹಕಾರದೊಂದಿಗೆ ಪ್ರಾಮಾಣಿಕ ಹಾಗೂ ಜನಪರವಾದ ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಸಹಕಾರ, ಬೆಂಬಲ ಕೊಟ್ಟ ಎಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು) ಎಂದು ತಿಳಿಸಿದ್ದಾರೆ.

ಡಾ.ಪಿ.ಎಸ್. ಹರ್ಷ ಅವರ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರದ ಬಹುತೇಕ ಜನರು, ‘ನಿಮ್ಮ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಕುಡ್ಲದ ಹೆಸರು ಹಾಳಾಗದಂತೆ ನೋಡಿಕೊಂಡಿದ್ದೀರಿ. ಆದಷ್ಟು ಬೇಗ ಮತ್ತೆ ಮಂಗಳೂರಿಗೆ ಬನ್ನಿ’ ಎಂದು ಆಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.