ಮಂಗಳೂರು: ಸಾಲ ಪಡೆಯಲು ಮೂವರು ವ್ಯಕ್ತಿಗಳು ನೀಡಿದ್ದ ಒಟ್ಟು 401.7 ಗ್ರಾಂ ಚಿನ್ನಾಭರಣಗಳು ನಕಲಿ ಆಗಿವೆ ಎಂದು ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಬಂಡಿ ಜನಾರ್ದನ ರೆಡ್ಡಿ ಅವರು ನಗರದ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘2020ರ ಸೆ. 12ರಿಂದ 2021ರ ಫೆ 18ರ ನಡುವೆ ಮೂವರು ಒಟ್ಟು 401.7 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ₹ 13.12 ಲಕ್ಷ ಸಾಲ ಪಡೆದಿದ್ದರು. ಅವರು ಸಾಲವನ್ನೂ ಮರುಪಾವತಿಸಿಲ್ಲ. ಅವರು ಅಡವಿಟ್ಟ ಚಿನ್ನ 22 ಕ್ಯಾರೆಟ್ನದ್ದಲ್ಲ. ಉದ್ದೇಶಪೂರ್ವಕವಾಗಿ ನಕಲಿ ಚಿನ್ನ ಅಡವಿಟ್ಟು ಅವರು ಸಂಸ್ಥೆಗೆ ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.