ಉಜಿರೆ: ಗೇರುಕಟ್ಟೆ ಎಸ್.ಎಸ್.ಎಫ್ ಶಾಖೆಯ ವತಿಯಿಂದ ಮಂಗಳವಾರ ರೈತರೊಬ್ಬರ ತೋಟದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ದೆಹಲಿಯ ರೈತ ಚಳವಳಿಗೆ ಬೆಂಬಲ ವ್ಯಕ್ತಪಡಿಸಲಾಯಿತು. ಹಮೀದ್ ಜಿ.ಡಿ ಅವರ ತೋಟದಲ್ಲಿ ಹಿರಿಯ ಕೃಷಿಕ ಅಹಮ್ಮದ್ ಕುಂಞ ಧ್ವಜಾರೋಹಣ ಮಾಡಿದರು.
ಆಸಿಫ್ ಉಸ್ತಾದ್ ದಿಕ್ಸೂಚಿ ಭಾಷಣ ಮಾಡಿದರು. ನವಾಜ್ ಮಾವಿನಕಟ್ಟೆ, ಇಸಾಕ್ ಅಳದಂಗಡಿ, ಉಸ್ಮಾನ್, ಸಿದ್ದಿಕ್, ಸೈಫುಲ್ಲಾ ಗೇರುಕಟ್ಟೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.