ADVERTISEMENT

ಮೂಡಬಿದಿರೆ: ಇಂದಿರಾ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 16:43 IST
Last Updated 1 ನವೆಂಬರ್ 2021, 16:43 IST
 ಮೂಡುಬಿದಿರೆಯಲ್ಲಿ ಭಾನುವಾರ ಇಂದಿರಾಗಾಂಧಿ ಪುಣ್ಯತಿಥಿ ನಡೆಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ವಲೇರಿಯನ್ ಸಿಕ್ವೇರಾ, ಸುಪ್ರಿಯಾ ಶೆಟ್ಟಿ ಇದ್ದರು.
 ಮೂಡುಬಿದಿರೆಯಲ್ಲಿ ಭಾನುವಾರ ಇಂದಿರಾಗಾಂಧಿ ಪುಣ್ಯತಿಥಿ ನಡೆಯಿತು. ಮಾಜಿ ಸಚಿವ ಅಭಯಚಂದ್ರ ಜೈನ್, ವಲೇರಿಯನ್ ಸಿಕ್ವೇರಾ, ಸುಪ್ರಿಯಾ ಶೆಟ್ಟಿ ಇದ್ದರು.   

ಮೂಡುಬಿದಿರೆ: ‘ಇಂದಿರಾಗಾಂಧಿ 17 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ, ಏಕತೆಗಾಗಿ ಪ್ರಾಣ ತ್ಯಾಗ ಮಾಡಿದ ಧೀಮಂತ ಮಹಿಳೆ. ನಾಯಕಿ ಎಂಬ ಅಹಂಕಾರ ಇಲ್ಲದೆ, ಬಡವರು, ದೀನರ ಹಸಿವನ್ನು ದೂರ ಮಾಡಿದವರು. ಅಂದು ಕಾಂಗ್ರೆಸ್ ಪಕ್ಷದವರೇ ಕೆಲವರು ಅಧಿಕಾರದ ಆಸೆಯಿಂದ ಇಂದಿರಾಗಾಂಧಿ ಅವರನ್ನು ಕೆಳಗಿಸಲು ಪ್ರಯತ್ನಿಸಿದ್ದರು. ಅದು ಕೈಗೂಡದೆ ಇದ್ದುದರಿಂದ ಅವರು ಪ್ರಧಾನಿಯಾಗಿ ಜನಪರ ಕೆಲಸ ಮಾಡಲು ಸಾಧ್ಯವಾಯಿತು’ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಇಂದಿರಾಗಾಂಧಿ 37ನೇ ಪುಣ್ಯತಿಥಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಧಾನ ಕಾರ್ಯದರ್ಶಿ ರತ್ನಾಕರ ಮೊಯಿಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಇಕ್ಬಾಲ್ ಕರೀಂ, ಸುರೇಶ್ ಪ್ರಭು, ಪುರಂದರ ದೇವಾಡಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT