ADVERTISEMENT

ಕನಕ ಕೀರ್ತನ ಗಂಗೋತ್ರಿ: 21 ಗಾಯಕರಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 14:49 IST
Last Updated 12 ಅಕ್ಟೋಬರ್ 2021, 14:49 IST
ಕನಕದಾಸರು
ಕನಕದಾಸರು   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಅ.8 ರಂದು ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಏಳು ವಿಭಾಗಗಳಲ್ಲಿ 21 ಗಾಯಕರನ್ನು ‘ಕನಕ ಕೀರ್ತನ ಗಂಗೋತ್ರಿ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ.

‘ಸಾಮುದಾಯಿಕ ಪಾಲ್ಗೊಳ್ಳುವಿಕೆ’ಯ ಆಶಯದ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು92 ಅಭ್ಯರ್ಥಿಗಳು ಭಾಗವಹಿಸಿದ್ದರು’ ಎಂದು ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ತಿಳಿಸಿದ್ದಾರೆ.

ಆಯ್ಕೆಯಾದ ಗಾಯಕರ ವಿವರ ಇಂತಿದೆ.

ADVERTISEMENT

ಪ್ರೌಢ ಶಾಲೆ:ಶ್ರೀರಕ್ಷ ಎಸ್. ಎಚ್. ಪೂಜಾರಿ, ವಿಶ್ವಮಂಗಳ ಪ್ರೌಢಶಾಲೆ, ಕೊಣಾಜೆ, ಪ್ರತೀಕ್ಷ ಆರ್, ಶ್ರೀರಾಮಕೃಷ್ಣ ಪ್ರೌಢಶಾಲೆ, ಬಂಟ್ಸ್ ಹಾಸ್ಟೆಲ್, ಮಂಗಳೂರು, ಶ್ರೀಕರಿ, ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್

ಪದವಿ ಪೂರ್ವ:ಅವನಿ ಎಸ್ ಭಟ್, ಶಾರದಾ ಕಾಲೇಜು, ಕೊಡಿಯಾಲ್ ಬೈಲ್, ಮಂಗಳೂರು, ವೆಂಕಟೇಶ್ ಮಲ್ಯ, ಮಹಾವೀರ ಪ. ಪೂ ಕಾಲೇಜು, ಮೂಡುಬಿದಿರೆ, ರವಿಚಂದ್ರ, ಮಹಾವೀರ ಪ.ಪೂ ಕಾಲೇಜು, ಮೂಡುಬಿದಿರೆ

ಪದವಿ:ಆರ್. ಸುಧೀಕ್ಷ, ಪ್ರಥಮ ಬಿಕಾಂ, ಕೆನರಾ ಕಾಲೇಜು, ಮಂಗಳೂರು, ವಿಭಾಶ್ರೀ ಎಂ.ಎಸ್. ದ್ವಿತೀಯ ಬಿಸಿಎ, ಶ್ರೀವಿವೇಕಾನಂದ ಕಾಲೇಜು, ಪುತ್ತೂರು, ಶರಣ್ಯ ಕೆ.ಎನ್ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ

ಸ್ನಾತಕೋತ್ತರ ಮತ್ತು ಸಂಶೋಧನೆ:ಶ್ರೀವಾಣಿ ಕಾಕುಂಜೆ, ರಸಾಯನ ಶಾಸ್ತ್ರ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಚೈತ್ರ ಕೊಪ್ಪಳ, ಕಂಪ್ಯೂಟರ್ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ರೂಪ, ಪ್ರಥಮ ಎಂ.ಕಾಂ. ಶ್ರೀವಿವೇಕಾನಂದ ಕಾಲೇಜು, ಪುತ್ತೂರು.

ಬೋಧಕ:ಪೃಥ್ವಿ ಶೆಣೈ, ಸಹಾಯಕ ಪ್ರಾಧ್ಯಾಪಕರು, ಎಂ.ಐ.ಟಿ. ಮಣಿಪಾಲ, ಡಾ. ಅನಿತ ಎಸ್. ಸಹಾಯಕ ಪ್ರಾಧ್ಯಾಪಕರು, ಕೆ.ವಿ.ಜಿ ಮೆಡಿಕಲ್ ಕಾಲೇಜು, ಸುಳ್ಯ, ರಚನಾ ಕಾಮತ್, ಶಿಕ್ಷಕಿ, ಕೆನರಾ ಪ್ರೌಢಶಾಲೆ, ಡೊಂಗರಕೇರಿ, ಮಂಗಳೂರು

ಬೋಧಕೇತರ:ಯಶವಂತ, ವಾಹನ ಚಾಲಕರು, ಮಂಗಳೂರು ವಿಶ್ವವಿದ್ಯಾನಿಲಯ, ಬೇಬಿ, ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ರಮೇಶ್ ಯು. ಅನ್ವಯಿಕ ಸಸ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ.

ಸಾರ್ವಜನಿಕ:ಅಶ್ವನಿ ಕುಮಾರ್ ಎನ್.ಕೆ.ಆರ್. ಬಿಜೈ, ಮಂಗಳೂರು, ವಾಮನ ಪೈ, ಕಾರ್ಪೊರೇಷನ್ ಬ್ಯಾಂಕ್, ಮಂಗಳೂರು, ಗಣೇಶ್ ಪೂಜಾರಿ, ಬಗಂಬಿಲ, ಮಂಗಳೂರು

ಮೌಲ್ಯ ಮಾಪಕರಾಗಿ ಸಂಗೀತ ವಿದ್ವಾನ್ ನಾರಾಯಣ ಭಂಡಾರಿ, ಮೂಡುಬಿದಿರೆ, ಮುರಳೀಧರ ಕಾಮತ್, ಮಂಗಳೂರು, ಡಾ. ಬಾಲಕೃಷ್ಣ ಭಾರಧ್ವಾಜ್, ಮಂಗಳೂರು, ಮಂಜುಳಾ ಜಿ. ರಾವ್ ಇರಾ, ಸುಮನ. ಪಿ ಮೂಡುಬಿದಿರೆ, ಶ್ರೀದೇವಿ ಕಲ್ಲಡ್ಕ ಇವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.