ಮಂಗಳೂರು: ಎಂಆರ್ಪಿಎಲ್ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುರತ್ಕಲ್ನ ಗುಡ್ಡೆಕೊಪ್ಲ ಬೀಚ್ನಲ್ಲಿ ಈಚೆಗೆ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು.
ಕೆಎಸ್ಪಿಸಿಬಿ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್ ಎಚ್. ಉದ್ಘಾಟಿಸಿದರು. ಮಂಜು ಆರ್, ಸ್ಥಳೀಯ ಮುಖಂಡರಾದ ಕೇಶವ ಕುಂದರ್, ಸುಧೀರ್ ಶ್ರೀಯಾನ್, ಎಂಆರ್ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಸುರೇಶ್ ಕೆ. ರಾವ್, ಚೀಫ್ ಜನರಲ್ ಮ್ಯಾನೇಜರ್ ಎಂ.ಎಸ್. ಸುದರ್ಶನ್, ಜನರಲ್ ಮ್ಯಾನೇಜರ್ಗಳಾದ ಪ್ರಸನ್ನ ಕುಮಾರ್ ಟಿ, ರಾಜೇಂದ್ರ ಆಚಾರ್ಯ, ಎಂಆರ್ಪಿಎಲ್ ಹಾಗೂ ಕೆಎಸ್ಪಿಸಿಬಿ ಸಿಬ್ಬಂದಿ, ಸ್ಥಳೀಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.