ADVERTISEMENT

ಸುಬ್ರಹ್ಮಣ್ಯ: ಶೌಚಾಲಯದಲ್ಲಿ ಬಂದಿಯಾದ ಚಿರತೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 5:52 IST
Last Updated 3 ಫೆಬ್ರುವರಿ 2021, 5:52 IST
ಶೌಚಾಲಯದೊಳಗೆ ಬಂಧಿಯಾದ ಚಿರತೆ
ಶೌಚಾಲಯದೊಳಗೆ ಬಂಧಿಯಾದ ಚಿರತೆ   

ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಬಿಳಿನೆಲೆ ಗ್ರಾಮದ ಕೈಕಂಬದ ಮನೆಯೊಂದರ ಶೌಚಾಲಯದೊಳಗೆ ಚಿರತೆಯೊಂದು ಬಂಧಿಯಾದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ, ಸುಬ್ರಹ್ಮಣ್ಯ ಸಮೀಪದ ಕೈಕಂಬದ ರೇಗಪ್ಪ ಅವರ ಮನೆಯ ಶೌಚಾಲಯಕ್ಕೆ ನುಗ್ಗಿದೆ. ಮನೆಯವರು ಕೂಡಲೇ ಶೌಚಾಲಯದ ಬಾಗಿಲು ಹಾಕಿ, ಚಿರತೆಯನ್ನು ಕೂಡಿ ಹಾಕಿದ್ದಾರೆ.

ಸದ್ಯ ಚಿರತೆ ಹಾಗೂ ನಾಯಿ ಶೌಚಾಲಯದಲ್ಲಿ ಬಂದಿಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.