ADVERTISEMENT

ಕಾಂಗ್ರೆಸ್ ಮುಕ್ತ ಪುತ್ತೂರು ನಗರಸಭೆ: ಶಾಸಕ ಸಂಜೀವ ಮಠಂದೂರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 11:43 IST
Last Updated 3 ಸೆಪ್ಟೆಂಬರ್ 2018, 11:43 IST
ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಡೀಕಯ್ಯರನ್ನು ಬೇಂಕ್ ವತಿಯಿಂದ ಬೀಳ್ಕೊಡಲಾಯಿತು. (ಉಪ್ಪಿನಂಗಡಿ ಚಿತ್ರ)
ಉಪ್ಪಿನಂಗಡಿ ಸಿ.ಎ. ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಡೀಕಯ್ಯರನ್ನು ಬೇಂಕ್ ವತಿಯಿಂದ ಬೀಳ್ಕೊಡಲಾಯಿತು. (ಉಪ್ಪಿನಂಗಡಿ ಚಿತ್ರ)   

ಪುತ್ತೂರು: ‘ಭಾರಿ ಗೆಲುವಿನ ಮೂಲಕ ನಗರಸಭಾ ಚುನಾವಣೆಯಲ್ಲಿ ಹೊಸ ರಾಜಕೀಯ ಇತಿಹಾಸ ನಿರ್ಮಾಣವಾಗಿದೆ. ಪುತ್ತೂರಿನ ಜನತೆ ಜಾತಿ-ಮತ -ಧರ್ಮ ನೋಡದೆ ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡುವ ಮಹಾತ್ಕಾರ್ಯದ ಮೂಲಕ ಪುತ್ತೂರನ್ನು ಕಾಂಗ್ರೆಸ್ ಮುಕ್ತಗೊಳಿಸಿದ್ದಾರೆ’ ಎಂದು ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದ್ದಾರೆ.

ಪುತ್ತೂರು ನಗರಸಭೆಯ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಪುತ್ತೂರು ನಗರಸಭೆಯ 31 ವಾರ್ಡ್‌ಗಳ ಪೈಕಿ 25 ವಾರ್ಡ್‌ಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಟ್ಟ ಪುತ್ತೂರಿನ ಜನತೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಮತ್ತು ಶಾಸಕನಾಗಿ ಕೃತಜ್ಞತೆ ಸಲ್ಲಿಸುತ್ತೇನೆ ’ ಎಂದರು.

‘ನಗರಸಭೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿ, ಅರ್ಜಿದಾರರ ಅಲೆದಾಟ ನಿವಾರಣೆ. ಭ್ರಷ್ಟಾಚಾರ ಮುಕ್ತ ಜನಸ್ನೇಹಿ ಆಡಳಿತವನ್ನು ನೀಡಲು ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ವಚನದಂತೆ ಬದ್ಧವಾಗಿದೆ, ಚತುಷ್ಪಥ ರಸ್ತೆ, ಸುಂದರ ಉದ್ಯಾನ, 24 ಗಂಟೆ ಕಾಲವೂ ವಿದ್ಯುತ್ ಮತ್ತು ಕುಡಿಯುವ ನೀರು ,. ನಗರಸಭೆಗೆ ಸೇರ್ಪಡೆಗೊಂಡ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ, ಬಿಜೆಪಿ ಕಾಂಗ್ರೆಸ್ ಎಂಬ ತಾರತಮ್ಯ ಮಾ ಇಲ್ಲದೆ ಅನುದಾನವನ್ನು ಹಂಚಿಕೆ ನಮ್ಮ ಗುರಿ. ಒಳ್ಳೆಯ ಆಡಳಿತಕ್ಕೆ ಸಹಕಾರ ನೀಡಲು ಸಾಧ್ಯವಿಲ್ಲದ ಅಧಿಕಾರಿಗಳು ಇಲ್ಲಿಂದ ತೊಲಗಬಹುದು’ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.