ADVERTISEMENT

ಮಂಗಳೂರು: ನದಿಗೆ ಬಿದ್ದ ಪಿಕ್ಅಪ್ ವಾಹನ, ಚಾಲಕ‌ ಪಾರು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 8:00 IST
Last Updated 8 ಆಗಸ್ಟ್ 2020, 8:00 IST
ನೀರಿನಲ್ಲಿ ಕೊಚ್ಚಿಹೋದ ಪಿಕ್‌ಅಪ್ ವಾಹನ
ನೀರಿನಲ್ಲಿ ಕೊಚ್ಚಿಹೋದ ಪಿಕ್‌ಅಪ್ ವಾಹನ   

ಮಂಗಳೂರು: ನೆಲ್ಯಾಡಿ -ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೀರಕಟ್ಟೆ ಸಮೀಪ ಪಿಕಪ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕ ಹೊಳೆಗೆ ಬಿದ್ದಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.

ಬೆಳಿಗ್ಗೆ 11 ಗಂಟೆ ವೇಳೆ ಈ ಘಟನೆ‌ ನಡೆದಿದೆ. ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಪಿಕಪ್‌ ನೀರಕಟ್ಟೆ ಸಮೀಪದ ಕಾಂಚನ ಕ್ರಾಸ್‌ ಸಮೀಪ ಚಾಲಕ ಆರೀಫ್‌ ಕೋಲ್ಪೆ ಅವರ ನಿಯಂತ್ರಣ ತಪ್ಪಿ ಪಕ್ಕದ ಹೊಳೆಗೆ ಬಿದ್ದಿದೆ.

ಆರೀಫ್‌ ಅವರು ಪಿಕ್ಅಪ್ ವಾಹನದಿಂದ ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಜೀಪನ್ನು ಹೊಳೆಯಿಂದ ಮೇಲಕ್ಕೆ ತರಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.