ವಿಟ್ಲ: ‘ನಮ್ಮದು ಅರಳಿಸುವ ಸಂಸ್ಕೃತಿ. ದೀಪವನ್ನು ಬೆಳಗಿಸುವ ಮೂಲಕ ಆಚರಣೆಗಳು ನಡೆಯಲಿ. ಬದುಕಿಗೆ ಸಂಸ್ಕಾರ ಬೇಕು. ಅಪ್ಪ ಅಮ್ಮ ನೀಡುವ ಸಂಸ್ಕಾರದಿಂದ ಸಂಸ್ಕೃತಿ ಉಳಿಯಲು ಸಾಧ್ಯ. ನಿರೀಕ್ಷೆಯ ಬದಲು ಪರಿಶ್ರಮದಿಂದ ಪರಿವರ್ತನೆ ಮಾಡಿ ಯಶಸ್ಸು ಸಾಧಿಸೋಣ’ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವ, ಗ್ರಾಮೋತ್ಸವ 2025ರ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೋತ್ಸವದ ತಿರುಳು ಪ್ರೀತಿ. ಗ್ರಾಮೋತ್ಸವದ ತಿರುಳು ಪ್ರೀತಿ–ವಿಶ್ವಾಸ. ಈ ಪ್ರೀತಿಯಿಂದ ಗ್ರಾಮೋತ್ಸವದ ಉದ್ದೇಶ ಯಶಸ್ವಿಯಾಗಿದೆ. ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಆಗಿದೆ ಎಂದು ಸ್ವಾಮೀಜಿ ಹೇಳಿದರು.
ಸಾಧ್ವಿ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ವಿವಿಧ ಕ್ಷೇತ್ರಗಳ ಗಣ್ಯರಾದ ಪ್ರೊ.ನರೇಂದ್ರ ಎಲ್.ನಾಯಕ್, ಡಾ.ಡಿ.ಸುರೇಶ ರಾವ್, ಕಿಶೋರ್ ಆಳ್ವ, ಶಂಕರ ಕೆ.ಶೆಟ್ಟಿ ಅಂಕ್ಲೇಶ್ವರ, ರವೀಂದ್ರನಾಥ ಭಂಡಾರಿ, ದಿವಾಕರ ದಾಸ ನೇರ್ಲಾಜೆ ಭಾಗವಹಿಸಿದ್ದರು.
ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ, ಮಹಾರಾಷ್ಟ್ರ ಘಟಕದ ಅಧ್ಯಕ್ಷ ವಾಮಯ್ಯ ಬಿ.ಶೆಟ್ಟಿ, ಮುಂಬೈ ಸೇವಾ ಬಳಗದ ಪ್ರಭಾಕರ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಎ.ಸುರೇಶ್ ರೈ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿ ಗುತ್ತು, ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ, ಸಂಘಟನಾ ಕಾರ್ಯದರ್ಶಿ ಮಾತೇಶ ಭಂಡಾರಿ ಒಡಿಯೂರು, ಗುರುದೇವ ಸಂಸ್ಥಾನದ ಕಾರ್ಯ ನಿರ್ವಾಹಕ ಪದ್ಮನಾಭ ಒಡಿಯೂರು ಭಾಗವಹಿಸಿದ್ದರು.
ಸ್ವಾಗತ ಸಮಿತಿ, ಜನ್ಮದಿನೋತ್ಸವ ಸಮಿತಿ, ಸಂಸ್ಥಾನದ ಸಹ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಊರ ಪರವೂರ ಭಕ್ತರು ಭಾಗವಹಿಸಿದ್ದರು.
ಬೆಳಿಗ್ಗೆ ಗಣಪತಿ ಹವನ, ಮಹಾಪೂಜೆ, ನಾಮಸಂಕೀರ್ತನೆ, ಪಾದಪೂಜೆ, ತುಲಾಭಾರ ಸೇವೆ, ಉಯ್ಯಾಲೆ ಸೇವೆ, ಗುರುವಂದನೆ ನಡೆಯಿತು.
ಭಕ್ತಿಸಂಕೀರ್ತನೆ, ಹನುಮಾನ್ ಚಾಲೀಸಾ ಸ್ಪರ್ಧೆ, ಕೆಸರುಗದ್ದೆ ಕ್ರೀಡಾಕೂಟ, ಒಳಾಂಗಣ ಕ್ರೀಡಾಕೂಟ, ಅಂತರ ಕಾಲೇಜು ಕಿರುನಾಟಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೈದ್ಯಕೀಯ ಚಿಕಿತ್ಸೆ, ಮರಣ ಸಾಂತ್ವನ ನೆರವು, ಮನೆ ನಿರ್ಮಾಣ, ವಿಧ್ಯಾಭ್ಯಾಸಕ್ಕೆ ಸಹಾಯ, ಟ್ರಸ್ಟ್, ಭಜನಾ ಮಂದಿರಗಳಿಗೆ ನೆರವು ನೀಡಲಾಯಿತು.
ಪ್ರಕಾಶ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.