ADVERTISEMENT

ಮೂಲ್ಕಿ: ಗಾಳಿ ಮಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 13:27 IST
Last Updated 3 ಆಗಸ್ಟ್ 2020, 13:27 IST
ಮೂಲ್ಕಿ ಬಳಿಯ ಕೆ.ಎಸ್.ರಾವ್ ನಗರದಲ್ಲಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಕುಸಿದಿರುವುದು
ಮೂಲ್ಕಿ ಬಳಿಯ ಕೆ.ಎಸ್.ರಾವ್ ನಗರದಲ್ಲಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಕುಸಿದಿರುವುದು   

ಮೂಲ್ಕಿ: ಭಾರಿ ಗಾಳಿ ಸಹಿತ ಸುರಿದ ಮಳೆಗೆ ಸೋಮವಾರ ಇಲ್ಲಿನ ಹೋಬಳಿಯಲ್ಲಿನ ಕೆ.ಎಸ್.ರಾವ್ ನಗರ ಹಾಗೂ ಸಸಿಹಿತ್ಲುವಿನಲ್ಲಿ ಹಾನಿಗಳಾಗಿವೆ.

ಕೆ.ಎಸ್. ರಾವ್ ನಗರದ ಕೆಇಬಿ ರಸ್ತೆಯ ಸುಲೋಚನ ನಾಯರ್ ಎಂಬವರಿಗೆ ಸೇರಿದ ಮನೆಯ ಮೇಲ್ಚಾವಣಿ ಸಂಪೂರ್ಣ ಕುಸಿದುಬಿದ್ದಿದೆ. ಸುಲೋಚನಾ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಮನೆಯೊಳಗಿದ್ದ ಸೂರಜ್, ಜಯಲಕ್ಷ್ಮಿ, ರಕ್ಷಿತ್, ದೇವಿಕಾ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ ಎನ್. ಕಂದಾಯ ಅಧಿಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಕೆರೆಯ ಹತ್ತಿರದಲ್ಲಿ ತೆಂಗಿನ ಮರ ಬಿದ್ದು ಮೂರು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಗೋಪಾಲ ಪಾತ್ರಿ ಹಾಗೂ ನಾರಾಯಣ ಕರ್ಕೇರ ಎಂಬವರು ತಕ್ಷಣವೇ ಮೆಸ್ಕಾಂಗೆ ದೂರು ನೀಡಿದ್ದು, ಸಂಭವನೀಯ ಅಪಾಯ ತಪ್ಪಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.