ಸುಬ್ರಹ್ಮಣ್ಯ: ಮೈಸೂರಿನ ‘ರಂಗಾಯಣ’ ತಿರುಗಾಟ ತಂಡದಿಂದ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ವರ್ಷದ ನೆನಪಿಗಾಗಿ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಇದೇ 25ರಿಂದ 27ರ ವರೆಗೆ ನಾಟಕ ಪ್ರದರ್ಶನ ನಡೆಯಲಿದೆ.
‘ಪಾಪು ಗಾಂಧಿ’ ಎಂಬ ನಾಟಕವನ್ನು ಇದೇ 25 ರಂದು ಬೆಳಿಗ್ಗೆ 10ರಿಂದ ಬಿಳಿನೆಲೆ ಗೋಪಾಲೃಷ್ಣ ಪ್ರೌಢಶಾಲೆಯಲ್ಲಿ, ಮಧ್ಯಾಹ್ನ 2ರಿಂದ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ, ಇದೇ 26ರಂದು ಬೆಳಿಗ್ಗೆ 10ರಿಂದ ಎಲಿಮಲೆ ಸರ್ಕಾರಿ ಪ್ರೌಢಶಾಲೆಯಲ್ಲಿ, ಮಧ್ಯಾಹ್ನ ಗಂಟೆ 2ರಿಂದ ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್ನಲ್ಲಿ, ಇದೇ27ರಂದು ಬೆಳಿಗ್ಗೆ 10ರಿಂದ ಸುಳ್ಯ ಶಾರದಾ ಕಾಲೇಜಿನಲ್ಲಿ, ಮಧ್ಯಾಹ್ನ 2ರಿಂದ ಸುಳ್ಯ ಕೊಡಿಯಾಲ್ಬೈಲ್ ಸರ್ಕಾರಿ ಕಾಲೇಜಿನಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಂಡದ ಮೇಲುಸ್ತುವಾರಿ ಜಯಪ್ರಕಾಶ್ ಬಿಳಿನೆಲೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.