ADVERTISEMENT

ಸುಳ್ಯದಲ್ಲಿ ಧಾರಾಕಾರ ಮಳೆ: ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 16:01 IST
Last Updated 5 ಸೆಪ್ಟೆಂಬರ್ 2022, 16:01 IST
ಸುಳ್ಯ ತಾಲ್ಲೂಕಿನ ಆರ್ತಾಜೆ ಎಂಬಲ್ಲಿ ಪೈಚಾರು- ಸೋಣಂಗೇರಿ ರಸ್ತೆ ಜಲಾವೃತಗೊಂಡಿರುವುದು
ಸುಳ್ಯ ತಾಲ್ಲೂಕಿನ ಆರ್ತಾಜೆ ಎಂಬಲ್ಲಿ ಪೈಚಾರು- ಸೋಣಂಗೇರಿ ರಸ್ತೆ ಜಲಾವೃತಗೊಂಡಿರುವುದು   

ಸುಳ್ಯ: ತಾಲ್ಲೂಕಿನಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆಯಾಗಿದೆ. ಪೈಚಾರು- ಸೋಣಂಗೇರಿ ರಸ್ತೆಯ ಆರ್ತಾಜೆ ಎಂಬಲ್ಲಿ ಮೋರಿ ಜಲಾವೃತಗೊಂಡು ವಾಹನ ಸಂ‍ಪರ್ಕ ಕಡಿತಗೊಂಡಿತ್ತು.

ಈಚೆಗೆ ರಸ್ತೆ ಅಭಿವೃದ್ಧಿ ಮಾಡಿದ ಸಂದರ್ಭದಲ್ಲಿ ಆರ್ತಾಜೆ ಮೋರಿಯನ್ನು ನಿರ್ಮಿಸಲಾಗಿದೆ. ಅದು ಜಲಾವೃತವಾದ ಕಾರಣ ನಾಗರಿಕರು, ವಾಹನ ಸವಾರರು ತೀವ್ರ ತೊಂದರೆಗೀಡಾದರು. ಪೇಟೆಯಿಂದ ಮನೆಗೆ ತೆರಳಲು ತಯಾರಾಗಿದ್ದವರಿಗೆ ಸಮಸ್ಯೆಯಾಯಿತು. 2 ಗಂಟೆ ಕಾದು ನೀರು ಇಳಿಕೆಯಾದ ಬಳಿಕ ತೆರಳಿದರು. ಉಮೇಶ್ ಎಂಬುವರ ತೋಟವೂ ಸಂಪೂರ್ಣ ಜಲಾವೃತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT