ಚನ್ನಗಿರಿ: ತಾಲ್ಲೂಕಿನ ಹಲವು ಭಾಗಗಳಲ್ಲಿ ಒಂದು ವಾರದಿಂದ ಮಳೆ ಕ್ಷೀಣಿಸಿರುವುದರಿಂದ ರೈತರು `ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ~ ಎಂದು ಹಲುಬುವಂತಾಗಿದೆ.
ಮೋಡವಾಗುತ್ತದೆ ಮಳೆ ಬರುತ್ತಿಲ್ಲ. ಜತೆಗೆ, ಬೇಸಿಗೆಯ ಬಿಸಿಲಿನಂತೆ ಬಿಸಿಲು. ಈ ಕಾರಣದಿಂದ ಬೆಳೆಗಳು ಬಾಡಲು ಆರಂಭಿಸಿವೆ. ಮೆಕ್ಕೆಜೋಳ, ರಾಗಿ, ಹತ್ತಿ, ಶೇಂಗಾ, ಹೈಬ್ರೀಡ್ ಜೋಳ ಮುಂತಾದ ಬೆಳೆಗಳು ಕಾಳುಕಟ್ಟಲು ಪ್ರಾರಂಭಿಸಿದ್ದು, ಈ ಸಮಯದಲ್ಲಿ ಕಾಳು ದೃಢವಾಗಲು ಮಳೆಯ ಅಗತ್ಯತೆ ಇದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮಳೆ ಬಾರದೇ ಇದ್ದರೆ ಬೆಳೆದು ನಿಂತ ಬೆಳೆಗಳು ಒಣಗಿ ಹೋಗುವ ಸಂಭವ ಇದೆ. ಒಟ್ಟಾರೆ ಈ ಬಾರಿ ಮಳೆಯ ಕೊರತೆಯಿಂದ ಶೇ. 25ರಷ್ಟು ಇಳುವರಿ ಕಡಿಮೆಯಾಗುವ ಸ್ಪಷ್ಟ ಲಕ್ಷಣಗಳು ಕಂಡು ಬರುತ್ತಿದೆ.
ತಾಲ್ಲೂಕಿನ ಕಸಬಾ, ಸಂತೇಬೆನ್ನೂರು, ಬಸವಾಪಟ್ಟಣ ಹೋಬಳಿಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ಉಬ್ರಾಣಿ ಹೋಬಳಿಯಲ್ಲಿ ಒಂದಿಷ್ಟು ಬೆಳೆಗಳು ಚೆನ್ನಾಗಿವೆ. ಆಗಾಗ ಈ ಹೋಬಳಿಯಲ್ಲಿ ತುಂತುರು ಮಳೆ ಬೀಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.