ADVERTISEMENT

ದಿಢೀರ್ ರದ್ದಾದ ಶಾ ಮಠ ಭೇಟಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 10:04 IST
Last Updated 29 ಏಪ್ರಿಲ್ 2018, 10:04 IST

ದಾವಣಗೆರೆ: ನಗರದ ಶ್ರೀಶೈಲ ಮಠಕ್ಕೆ ಭಾನುವಾರ ಭೇಟಿ ನೀಡಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸ್ವಾಮೀಜಿ ಗೈರುಹಾಜರಿಯಿಂದ ರದ್ದಾಗಿದೆ ಎಂದು ಮೂಲಗಳು ದೃಢಪಡಿಸಿವೆ.

ಶಾ ಅವರು ಶ್ರೀ ಶೈಲ ಜಗದ್ಗುರು ಪೀಠದ ಪೀಠಾಧಿಪತಿ ಡಾ.ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಆರ್ಶಿವಾದ ಪಡೆಯುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪಾಲ್ಗೊಳ್ಳುವುದರಿಂದ ಶಾ ಭೇಟಿಗೆ ಲಭ್ಯರಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

‘ಅಮಿತ್‌ ಶಾ ಹಾಗೂ ಸ್ವಾಮೀಜಿ ಭೇಟಿ ಕಾರ್ಯಕ್ರಮ ಅಧಿಕೃತವಾಗಿ ನಿಗದಿಯಾಗಿರಲಿಲ್ಲ. ಶಾ ರೋಡ್‌ ಷೋ ಮಠದ ಬಳಿಯೇ ಮುಕ್ತಾಯಗೊಳ್ಳುವಂತೆ ನಿಗದಿಪಡಿಸಲಾಗಿತ್ತು ಅಷ್ಟೇ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.