ದಾವಣಗೆರೆ: ಇಲ್ಲಿನ ಲೋಕಿಕೆರೆ ರಸ್ತೆಯಲ್ಲಿನ ಮಹಾರಾಜ ಸೋಪ್ ಫ್ಯಾಕ್ಟರಿ ಮಾಲೀಕ ರವಿರಾಜ್ ಎಂ.ಇ, ಅವರಿಗೆ ಸಾಫ್ಟ್ವೇರ್ ಕಂಪನಿಯೊಂದರ ಮಾಲೀಕ ಹಾಗೂ ನಿರ್ದೇಶಕ ₹5 ಕೋಟಿ ವಂಚಿಸಿದ್ದಾರೆ.
ಮಲ್ಲೇಶ್ವರಂನ ಐಕ್ಯ ಬಿಸಿನೆಸ್ ಸೊಲ್ಯುಷನ್ಸ್ ಸಂಸ್ಥಾಪಕ ರವಿಕುಮಾರ್ ಎಚ್.ಎಂ ಹಾಗೂ ನಿರ್ದೇಶಕ ಮತ್ತು ಅಜಯ್ ವೆಂಕಟೇಶನ್ ವಂಚಿಸಿದವರು.
ಕಂಪನಿಯ ಪ್ರಾಜೆಕ್ಟ್ಗಳಿಗೆ ಸಾಲ ಕೊಡಿ ಎಂದು ರವಿರಾಜ್ ಅವರನ್ನು ಸಂಪರ್ಕಿಸಿದ ಆರೋಪಿಗಳು ಅವರ ಮನವೊಲಿಸಿ 7 ತಿಂಗಳ ಅವಧಿಯಲ್ಲಿ ₹ 5 ಕೋಟಿಯನ್ನು ಆರ್ಟಿಜಿಎಸ್ ಮೂಲಕ ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಸಾಲ ಕೊಟ್ಟ 10 ತಿಂಗಳ ನಂತರ ರವಿರಾಜ್ ಸಾಲ ಹಿಂತಿರುಗಿಸುವಂತೆ ಆರೋಪಿಗಳನ್ನು ಕೇಳಿದ್ದಾರೆ.
ಆರೋಪಿಗಳು ರವಿರಾಜ್ ಅವರಿಗೆ 3 ಚೆಕ್ಗಳನ್ನು ನೀಡಿದ್ದು, ಅವುಗಳು ಬೌನ್ಸ್ ಆಗಿವೆ. ಇದರಿಂದ ಕೋಪಗೊಂಡ ರವಿರಾಜ್ ಆರೋಪಿಗಳಿಗೆ ಫೋನ್ ಮಾಡಿದಾಗ ಮಾತುಕತೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಆನಂತರ ಬೆಂಗಳೂರಿಗೆ ಹೋದಾಗ ಆರೋಪಿಗಳು ಕಂಪನಿಯಲ್ಲಿ ಇರಲಿಲ್ಲ. ಮೊತ್ತೊಮ್ಮೆ ಸಂಪರ್ಕಿಸಿದಾಗ ‘ದಾವಣಗೆರೆಗೆ ಬಂದು ಕೊಡುತ್ತೇವೆ’ ಎಂದು ಹೇಳಿದ್ದಾರೆ. ಅಲ್ಲಿಯೂ ಹಣ ಕೊಡಲಿಲ್ಲ. ವಿದ್ಯಾನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.