ADVERTISEMENT

ಹುಚ್ಚುನಾಯಿ ದಾಳಿ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 6:26 IST
Last Updated 11 ಜನವರಿ 2018, 6:26 IST
ಮಲೇಬೆನ್ನೂರು ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಮಂಗಳವಾರ ನಾಯಿ ಕಡಿತಕ್ಕೆ ಒಳಗಾಗ ಬಾಲಕಿ ಉಷಾ.
ಮಲೇಬೆನ್ನೂರು ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಮಂಗಳವಾರ ನಾಯಿ ಕಡಿತಕ್ಕೆ ಒಳಗಾಗ ಬಾಲಕಿ ಉಷಾ.   

ಮಲೇಬೆನ್ನೂರು: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಮಂಗಳವಾರ ಹುಚ್ಚು ನಾಯಿ ದಾಳಿ ಮಾಡಿ ಒಬ್ಬ ಬಾಲಕಿ ಹಾಗೂ ಒಬ್ಬ ಗೃಹಣಿಯನ್ನು ಕಡಿದು ಗಾಯಗೊಳಿಸಿದ ಘಟನೆಯಿಂದ ನಾಗರಿಕರು ಆತಂಕಕ್ಕೆ ಒಳಗಾದ ಘಟನೆ ಸಂಭವಿಸಿದೆ.

ಅಂಗನವಾಡಿ ಕೇಂದ್ರಕ್ಕೆ ಹೋಗುತ್ತಿದ್ದ ಬಾಲಕಿ ಉಷಾ ಎದೆ ಭಾಗ ಹಾಗೂ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಸಂಕೊಳ್ಳಿ ಲಲಿತಾ ಪುಟ್ಟಣ್ಣ ಕಾಲಿನ ಭಾಗಕ್ಕೆ ನಾಯಿ ಕಚ್ಚಿದೆ.

ಗಾಯಗೊಂಡ ಇಬ್ಬರಿಗೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ADVERTISEMENT

ಇದಕ್ಕೂ ಮುನ್ನ ರಸ್ತೆಯಲ್ಲಿ ಓಡಾಡುತ್ತಿದ್ದವರ ಕೈಲಿದ್ದ ವಸ್ತುಗಳು ಹಾಗೂ ಕವರನ್ನು ನಾಯಿ ಹರಿದು ಹಾಕಿದೆ. ಬಡಾವಣೆ ನಾಗರಿಕರು ಹುಚ್ಚು ನಾಯಿ ಹಿಡಿಸಿ ಪಟ್ಟಣದಿಂದ ಹೊರಗೆ ಸಾಗಿಸುವಂತೆ ಪುರಸಭೆಗೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.