ADVERTISEMENT

ಪೊಲೀಸರಿಗೆ, ಸಾರ್ವಜನಿಕರಿಗೆ ಆಹಾರ ವಿತರಿಸಿದ ಫೋಟೊಗ್ರಾಫರ್ಸ್‌ ತಂಡ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 16:26 IST
Last Updated 12 ಜೂನ್ 2021, 16:26 IST
ದಾವಣಗೆರೆ ಜಿಲ್ಲಾ ಫೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘ, ದಾವಣಗೆರೆ ತಾಲ್ಲೂಕು ಫೋಟೊಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಶನಿವಾರ ಪೊಲೀಸರಿಗೆ, ಸಾರ್ವಜನಿಕರಿಗೆ ಹೋಳಿಗೆ, ಚಿತ್ರಾನ್ನ, ನೀರು ವಿತರಿಸಲಾಯಿತು.
ದಾವಣಗೆರೆ ಜಿಲ್ಲಾ ಫೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘ, ದಾವಣಗೆರೆ ತಾಲ್ಲೂಕು ಫೋಟೊಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಶನಿವಾರ ಪೊಲೀಸರಿಗೆ, ಸಾರ್ವಜನಿಕರಿಗೆ ಹೋಳಿಗೆ, ಚಿತ್ರಾನ್ನ, ನೀರು ವಿತರಿಸಲಾಯಿತು.   

ದಾವಣಗೆರೆ: ಜಿಲ್ಲಾ ಫೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘ, ದಾವಣಗೆರೆ ತಾಲ್ಲೂಕು ಫೋಟೊಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹಾಗೂ ಅನ್ಯ ಸ್ಥಳದಿಂದ ಬಂದ ಸಾರ್ವಜನಿಕರಿಗೆ ಹೋಳಿಗೆ ಮತ್ತು ಚಿತ್ರನ್ನ, ನೀರನ್ನು ಶನಿವಾರ ವಿತರಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ನಿಮ್ಮ ಕಷ್ಟದ ಮಧ್ಯೆ ಇನ್ನೊಬ್ಬರ ಹಸಿವು ನೀಗಿಸುವ ಕೆಲಸ ಮಾಡಿದ್ದೀರಿ’ ಎಂದು ಶ್ಲಾಘಿಸಿದರು.

ಎಎಸ್‌ಪಿ ಎಂ. ರಾಜೀವ್ ಹಾಗೂ ತಹಶೀಲ್ದಾರ್ ಗಿರೀಶ್, ಮೇಯರ್ ಎಸ್ ಟಿ ವೀರೇಶ್,ರೈತ ಮುಖಂಡ ಲೋಕಿಕೆರೆ ನಾಗರಾಜ್ ಸಂಘದ ಜಿಲ್ಲಾ ಅಧ್ಯಕ್ಷ ವಿಜಯ್ ಜಾಧವ್ ಯೂತ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಕೆ.ಸಿ. ರಾಜು ಎಸ್‌.ಆರ್. ತಿಪ್ಪೇಸ್ವಾಮಿ, ಶ್ರೀನಾಥ್ ಪಿ. ಅಗಡಿ, ಕೆ.ಪಿ. ನಾಗರಾಜ್, ದುಗ್ಗೇಶ್, ಅರುಣ್ ಕುಮಾರ್, ಮಹಾಂತೇಶ್, ಮಲ್ಲಿಕಾರ್ಜುನ್, ಮಿಥುನ್, ಪ್ರಕಾಶ್, ರುದ್ರಮ್ಮ, ವಿವೇಕ್‌ ಬದ್ದಿ ಅವರೂ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.