ADVERTISEMENT

ಕಂಬಕ್ಕೆ ಡಿಕ್ಕಿ ಹೊಡೆದ  ಶಾಸಕ ಎಸ್‌.ಎ. ರವೀಂದ್ರನಾಥ್ ಮೊಮ್ಮಗನ ಕಾರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 5:45 IST
Last Updated 24 ಫೆಬ್ರುವರಿ 2020, 5:45 IST
ಅಪಘಾತ ನಡೆದ ಸ್ಥಳದಲ್ಲಿ ಅರುಣ್‌ಕುಮಾರ್ (ಎಡಚಿತ್ರ). ಕಾರಿನಲ್ಲಿ ಪತ್ತೆಯಾದ ಶಾಸಕ ಪಾಸ್ (ಬಲಚಿತ್ರ).
ಅಪಘಾತ ನಡೆದ ಸ್ಥಳದಲ್ಲಿ ಅರುಣ್‌ಕುಮಾರ್ (ಎಡಚಿತ್ರ). ಕಾರಿನಲ್ಲಿ ಪತ್ತೆಯಾದ ಶಾಸಕ ಪಾಸ್ (ಬಲಚಿತ್ರ).   

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎ. ರವೀಂದ್ರನಾಥ್ ಅವರ ಮೊಮ್ಮಗ, ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಪುತ್ರ ಅರುಣಕುಮಾರ ಚಲಾಯಿಸುತ್ತಿದ್ದ ಕಾರು ಭಾನುವಾರ ತಡರಾತ್ರಿ ಶಾಮನೂರು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ಮುರಿದು ಪಕ್ಕದ ಮನೆಯ ಮೇಲೆ ಬಿದ್ದಿದೆ.

ಪವಾಡ ಸದೃಶವಾಗಿ ಕಾರಲ್ಲಿದ್ದವರೂ ಮನೆಯಲ್ಲಿ ಇದ್ದವರೂ ಪಾರಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಲು ಅರುಣಕುಮಾರ ಮುಂದಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಬಿಗು ವಾತಾವರಣ ನಿರ್ಮಾಣಗೊಂಡಾಗ ಅರುಣ್‌ ಕುಮಾರ್ ಕಾರನ್ನು ಅಲ್ಲೇ ಬಿಟ್ಟು ತೆರಳಿದರು.

ಕಾರ್‌ನಲ್ಲಿ ಶಾಸಕರ ಪಾಸ್ ಇದೆ. ಶಾಸಕರನ್ನು ಮತ್ತುಅರುಣ ಕುಮಾರ ಅವರನ್ನು ಸ್ಥಳಕ್ಕೆಕರೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.