ADVERTISEMENT

ಆರು ಜವಳಿ ಉದ್ಯಮ ಘಟಕ ಸ್ಥಾಪನೆಗೆ ಅನುಮೋದನೆ

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:44 IST
Last Updated 21 ಅಕ್ಟೋಬರ್ 2022, 6:44 IST
ಶಿವಾನಂದ ಕಾಪಶಿ
ಶಿವಾನಂದ ಕಾಪಶಿ   

ದಾವಣಗೆರೆ: ಜಿಲ್ಲೆಯಲ್ಲಿ ಆರು ಜವಳಿ ಉದ್ಯಮ ಘಟಕ ಸ್ಥಾಪನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಆರು ಜವಳಿ ಘಟಕಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಯಿತು.

ತಾಲ್ಲೂಕಿನ ಕರಿಲಕ್ಕೇನಹಳ್ಳಿಯಲ್ಲಿ ₹ 2.83 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ, ಕರೂರು ಕೈಗಾರಿಕಾ ಪ್ರದೇಶದಲ್ಲಿ ₹ 2.5 ಲಕ್ಷ ಯೋಜನಾ ವೆಚ್ಚದ ರೆಡಿಮೇಡ್ ಗಾರ್ಮೆಂಟ್ಸ್, ಹರಿಹರ ತಾಲ್ಲೂಕಿನ ಹರ್ಲಾಪುರದಲ್ಲಿ ₹ 2.83 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ, ಹರಿಹರ ತಾಲ್ಲೂಕು ಹನಗವಾಡಿಯಲ್ಲಿ ₹ 2.83 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ, ಹರಿಹರ ತಾಲ್ಲೂಕು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ₹ 2.48 ಲಕ್ಷ ಯೋಜನಾ ವೆಚ್ಚದ ವಿದ್ಯುತ್ ಮಗ್ಗ ಹಾಗೂ ದಾವಣಗೆರೆ ನಗರದ ನಿಟುವಳ್ಳಿಯಲ್ಲಿ ₹ 2 ಕೋಟಿ ಯೋಜನಾ ವೆಚ್ಚದ ರೆಡಿಮೇಡ್ ಗಾರ್ಮೆಂಟ್ಸ್ ಘಟಕಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.

ADVERTISEMENT

ಲೋಕಿಕೆರೆ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ₹ 4.55 ಕೋಟಿ ಅಂದಾಜು ವೆಚ್ಚದ ಬಯೋ ಸ್ಟಿಮ್ಯುಲೆಂಟ್ಸ್ ಮೈಕ್ರೋ ನ್ಯೂಟ್ರಿಯನಟ್ಸ್ ಕಾರ್ಖಾನೆ ಆರಂಭಿಸಲು ಹೊಸ ಪ್ರಸ್ತಾವನೆ ಬಂದಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಲಿಂಗರಾಜ್, ಉದ್ಯಮಿಗಳಾದ
ಶ್ರೀನಿವಾಸ್, ಹನುಮಂತರಾವ್, ರೆಹಮಾನ್ ಮುಂತಾದವರು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.