ADVERTISEMENT

ಮಹಿಳೆಯರಿಂದ ಆಕರ್ಷಕ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 3:03 IST
Last Updated 11 ಅಕ್ಟೋಬರ್ 2021, 3:03 IST
ದಾವಣಗೆರೆಯ ರಾಂ ಆಕೋ ವೃತ್ತದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಮಹಿಳಾ ಬೈಕ್ ರ‍್ಯಾಲಿಗೆ ಸಂಸದರಾದ ಜಿ ಎಮ್ ಸಿದ್ದೇಶ್ವರ ಅವರು ಚಾಲನೆ ನೀಡಿದರು. ಮೇಯರ್ ಎಸ್.ಟಿ. ವಿರೇಶ್, ದೂಡಾ ಅಧ್ಯಕ್ಷರಾದ ದೇವರಮನಿ ಶಿವಕುಮಾರ್ ಅವರೂ ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ರಾಂ ಆಕೋ ವೃತ್ತದಲ್ಲಿ ನವರಾತ್ರಿ ಅಂಗವಾಗಿ ಆಯೋಜಿಸಿದ್ದ ಮಹಿಳಾ ಬೈಕ್ ರ‍್ಯಾಲಿಗೆ ಸಂಸದರಾದ ಜಿ ಎಮ್ ಸಿದ್ದೇಶ್ವರ ಅವರು ಚಾಲನೆ ನೀಡಿದರು. ಮೇಯರ್ ಎಸ್.ಟಿ. ವಿರೇಶ್, ದೂಡಾ ಅಧ್ಯಕ್ಷರಾದ ದೇವರಮನಿ ಶಿವಕುಮಾರ್ ಅವರೂ ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ನಗರದಲ್ಲಿಂದು ಹಿಂದೂ ಜಾಗರಣಾ ವೇದಿಕೆಯಿಂದ ಮಹಿಳಾ ದ್ವಿಚಕ್ರ ವಾಹನ ರ‍್ಯಾಲಿ ನಡೆಸಲಾಯಿತು.

ರಾಮ್ ಆ್ಯಂಡ್‌ ಕೋ ವೃತ್ತದಿಂದ ಆರಂಭಗೊಂಡ ರ‍್ಯಾಲಿಗೆ ಸಂಸದ ಜಿ.ಎಂ. ಸಿದ್ದೇಶ್ವರ, ಮೇಯರ್‌ ಎಸ್‌.ಟಿ. ವೀರೇಶ್‌ ಇನ್ನಿತರ ಗಣ್ಯರು ಚಾಲನೆ ನೀಡಿದರು.

ದ್ವಿಚಕ್ರಗಳ ಜೊತೆಗೆ ಬುಲೆಟ್ ಮತ್ತಿತರೆ ಬೈಕ್ ಗಳ ಏರಿ ತಲೆಗೆ ಕೇಸರಿ ರುಮಾಲು ಧರಿಸಿ ಮಹಿಳೆಯರು ತಯಾರಾಗಿದ್ದರು. ಚಾಲನೆ ಸಿಗುತ್ತಿದಂತೆ ಸಾಲು ಸಾಲಾಗಿ ದ್ವಿಚಕ್ರ ವಾಹನ, ಬೈಕ್ ಗಳ ಓಡಿಸುತ್ತಾ ಗಮನ ಸೆಳೆದರು. ಮಂಜುಳಾ ಮಹೇಶ್, ಎಚ್.ಸಿ. ಜಯಮ್ಮ, ಭಾಗ್ಯ ಪಿಸಾಳೆ, ಸಹನಾ ಮಂಜುನಾಥ, ಸರೋಜಮ್ಮ ದೀಕ್ಷಿತ್, ಶೀಲಾ ಶ್ರೀನಿವಾಸ, ಶೃತಿ ಮಾರುತಿ ಸಹಿತ ಹಲವರು ಭಾಗವಹಿಸಿದ್ದರು.

ADVERTISEMENT

ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಹಿಂದೂ ಜಾಗರಣ ವೇದಿಕೆಯ ಸತೀಶ್ ಪೂಜಾರಿ, ಗೋಪಾಲ್ ರಾವ್ ಸಾವಂತ್, ವಿನಾಯಕ ರಾನಡೆ, ತಿಪ್ಪೇಸ್ವಾಮಿ, ರಾಜೇಶ್, ಅರುಣ್ ಕುಮಾರ್ ನುಗ್ಗೇಹಳ್ಳಿ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.