ADVERTISEMENT

ಅಯೋಧ್ಯೆ ತೀರ್ಪು ಐತಿಹಾಸಿಕ: ಶಾಸಕ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 11:06 IST
Last Updated 10 ನವೆಂಬರ್ 2019, 11:06 IST
ಶಾಸಕ ಎಂ.ಪಿ.ರೇಣುಕಾಚಾರ್ಯ
ಶಾಸಕ ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ: ಅಯೋಧ್ಯೆ ತೀರ್ಪು ಐತಿಹಾಸಿಕ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದ ಕೆ.ಬಿ.ಬಡಾವಣೆಯ 25ನೇ ವಾರ್ಡ್‌ ಅಭ್ಯರ್ಥಿ ಎಸ್‌.ಟಿ. ವೀರೇಶ್‌ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ‘ಬಹುದಿನಗಳಿಂದ ಕಂಡಿದ್ದ ರಾಮಮಂದಿರ ನಿರ್ಮಾಣದ ಕನಸು ಸಂಘರ್ಷದಿಂದ ಸಾಧ್ಯವಾಗಿರಲಿಲ್ಲ. ದಶಕಗಳಿಂದ ಕಾಯುತ್ತಿದ್ದ ತೀರ್ಪು ಇಂದು ಬಂದಿರುವುದು ಸ್ವಾಗತಾರ್ಹ. ಹಿಂದೂ–ಮಸ್ಲಿಮರು ಸೌಹಾರ್ದದಿಂದ ಬಾಳುತ್ತಿದ್ದೇವೆ. ಜನರು ಶಾಂತಿ ಕಾಪಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT