ADVERTISEMENT

ದಾವಣಗೆರೆ | ಬ್ಯಾಂಕ್‌ ದರೋಡೆಗೆ ಯತ್ನ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 4:49 IST
Last Updated 22 ಜುಲೈ 2022, 4:49 IST

ದಾವಣಗೆರೆ: ನಗರದ ಪಿ.ಬಿ. ರಸ್ತೆಯ ಆಕ್ಸಿಸ್ ಬ್ಯಾಂಕ್‌ನಲ್ಲಿ ಕಳವಿಗೆ ಯತ್ನಿಸಿದ ಮೂವರನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ರಘು, ಅ‌ಣ್ಣೇಶಿ ಹಾಗೂ ರಮೇಶ್ ಬಂಧಿತರು. ಇವರು ಆಕ್ಸಿಸ್‌ ಬ್ಯಾಂಕಿನ ಕಿಟಕಿಯ ಸರಳನ್ನು ಯಂತ್ರದಿಂದ ಕತ್ತರಿಸುತ್ತಿದ್ದರು. ಶಬ್ದ ಕೇಳಿ ಅಲ್ಲಿಗೆ ಬಂದ ಬಡಾವಣೆ ಪೊಲೀಸ್‌ ಠಾಣೆಯ ಸಿಬ್ಬಂದಿ ಧನಂಜಯ ರಾಜ್‌ ಅರಸ್‌ ಹಾಗೂ ಸುರೇಶ್‌ ಎಲ್‌. ಅವರು ಆರೋಪಿ ಅಣ್ಣೇಶಿಯನ್ನು ಹಿಡಿದು ವಿಚಾರಣೆ ನಡೆಸಿದರು. ಪೊಲೀಸರನ್ನು ಕಂಡ ಆರೋಪಿಗಳಾದ ರಘು, ರಮೇಶ್‌ ಪರಾರಿಯಾಗಿದ್ದರು. ಬಳಿಕ ಪೊಲೀಸರು ಅಣ್ಣೇಶಿಯೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಹೋಗಿರಘು, ರಮೇಶ್‌ ಅವರನ್ನು ಸುತ್ತುವರಿದು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಯಂತ್ರ, ಆಕ್ಸೆಲ್‌ ಬ್ಲೇಡ್‌ ಹಾಗೂ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಐ ಧನಂಜಯ, ಎಎಸ್‌ಐ ಕರಿಯಪ್ಪ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.