ADVERTISEMENT

ಭಗತ್‌ಸಿಂಗ್ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 15:06 IST
Last Updated 28 ಸೆಪ್ಟೆಂಬರ್ 2020, 15:06 IST
ದಾವಣಗೆರೆಯಲ್ಲಿ ಎಐವೈಎಫ್‌ನಿಂದ ಭಗತ್‌ ಸಿಂಗ್‌ ಜನ್ಮದಿನ ಆಚರಣೆ ನಡೆಯಿತು
ದಾವಣಗೆರೆಯಲ್ಲಿ ಎಐವೈಎಫ್‌ನಿಂದ ಭಗತ್‌ ಸಿಂಗ್‌ ಜನ್ಮದಿನ ಆಚರಣೆ ನಡೆಯಿತು   

ದಾವಣಗೆರೆ: ಅಖಿಲ ಭಾರತ ಯುವಜನ ಫೆಡರೇಷನ್‌ನಿಂದ (ಎಐವೈಎಫ್) ಸೋಮವಾರ ಕ್ರಾಂತಿಕಾರಿ ಭಗತ್‌ಸಿಂಗ್ ಜನ್ಮದಿನ ಆಚರಿಸಲಾಯಿತು.

ರೈಲು ನಿಲ್ದಾಣದ ಮುಂಭಾಗದಲ್ಲಿರುವ ಭಗತ್‌ಸಿಂಗ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಮಾತನಾಡಿ, ‘ಭಾರತದ ಸ್ವಾತಂತ್ರ್ಯಕ್ಕಾಗಿ ಸಣ್ಣ ವಯಸ್ಸಿನಲ್ಲಿಯೇ ನೇಣುಗಂಬಕ್ಕೆ ಏರಿದವರು ಭಗತ್‌ಸಿಂಗ್‌. ಬಡವರು, ಶ್ರೀಮಂತರ ನಡುವಿನ ಕಂದಕ ಬದಲಾಗಲು ಪುರಾತನ ಅಸಮಾನ ವ್ಯವಸ್ಥೆಯನ್ನು ಹೋಗಲಾಡಿಸಲು ಆಮೂಲಾಗ್ರ ಬದಲಾವಣೆ ಅಗತ್ಯ ಎಂದು ಸಾರಿದವರು’ ಎಂದು ನೆನಪಿಸಿಕೊಂಡರು.

ಎಐ‌ವೈಎಫ್ ಜಿಲ್ಲಾಧ್ಯಕ್ಷ ಕೆರೆಹಳ್ಳಿ ರಾಜು, ಕಾರ್ಯದರ್ಶಿ ಎ. ತಿಪ್ಪೇಶ್, ಉಪಾಧ್ಯಕ್ಷ ಫಜಲ್‌, ಗದಿಗೇಶ್ ಪಾಳೇದ್, ಇರ್ಫಾನ್, ಮಂಜುನಾಥ, ರುದ್ರೇಶ್‌, ಅವರೂ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.