ADVERTISEMENT

ನಿಯಮ ಉಲ್ಲಂಘಿಸಿ ಮದುವೆ: ವೈದ್ಯೆ ವಧು–ವರ ಸೇರಿ ಐವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಮೇ 2021, 4:02 IST
Last Updated 22 ಮೇ 2021, 4:02 IST

ಹರಪನಹಳ್ಳಿ:ವಿವಾಹ ನಿಷೇಧ ಆದೇಶ ಉಲ್ಲಂಘಿಸಿ ಮದುವೆ ನೆರವೇರಿಸಿದ ಆರೋಪದ ಮೇಲೆ ವೈದ್ಯೆ ವಧು ಮತ್ತು ವರ ಸೇರಿ ಐವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ನಿಲುವಂಜಿ ಗ್ರಾಮದವಧು, ವೈದ್ಯೆ ಡಾ. ಬಸವರಾಜೇಶ್ವರಿ (ಡಾ.ನಿಧಿ), ವರ ಎಚ್.ಬಿ. ಸಿದ್ದಪ್ಪ, ಎನ್.ಬಸವರಾಜ್, ಕಮಲಮ್ಮ, ಬಸವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಶುಕ್ರವಾರ ಮದುವೆ ನಿಶ್ಚಯವಾಗಿತ್ತು. ಆದರೆ, ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಗುರುವಾರ ರಾತ್ರಿ 9ಕ್ಕೆ ನಿಲುವಂಜಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ 20ರಿಂದ 25 ಜನ ಸೇರಿ ಆರತಿ ಕಾರ್ಯಕ್ರಮ ನಡೆಸುತ್ತಿದ್ದರು.

ADVERTISEMENT

ಪ್ರಭಾರ ಕಂದಾಯ ನಿರೀಕ್ಷಕ ಎಚ್. ಹೊನ್ನಪ್ಪ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಂ. ಚನ್ನಬಸಯ್ಯ, ಪಿಡಿಒ ಅಂಜಿನಪ್ಪ, ನೀರಗಂಟಿ ಕೊಟ್ರೇಶ್ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಬೆಣ್ಣಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಟಿ.ಅಂಜಿನಪ್ಪ ನೀಡಿದ ದೂರಿನ ಮೇರೆಗೆ ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.