ADVERTISEMENT

ಮಲೇಬೆನ್ನೂರು: ವೀರಾಂಜನೇಯ ಸ್ವಾಮಿ ವೈಭವದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:58 IST
Last Updated 8 ಏಪ್ರಿಲ್ 2025, 13:58 IST
ಮಲೇಬೆನ್ನೂರು ಸಮೀಪದ ಕುಣಿಬೆಳೆಕೆರೆ ವೀರಾಂಜನೇಯ ಸ್ವಾಮಿ ರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು
ಮಲೇಬೆನ್ನೂರು ಸಮೀಪದ ಕುಣಿಬೆಳೆಕೆರೆ ವೀರಾಂಜನೇಯ ಸ್ವಾಮಿ ರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು   

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯ ಕುಣಿಬೆಳೆಕೆರೆ ಗ್ರಾಮದ ವೀರಾಂಜನೇಯ ಸ್ವಾಮಿ ದೇವರ ರಥೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು.

ಸಂಪ್ರದಾಯದಂತೆ ಪೂಜಾ ವಿಧಿಗಳನ್ನು ದೇವಾಲಯದಲ್ಲಿ ನೆರವೇರಿಸಿ, ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮ ಪ್ರದಕ್ಷಿಣೆ ಹಾಕುವ ಮೂಲಕ ಉತ್ಸವದ ಜರುಗಿತು.

ಮಂಗಳವಾದ್ಯ, ತಮಟೆಮೇಳ, ನಾಸಿಕ್‌ ಡೋಲು, ಡೊಳ್ಳು, ನಂದಿಕೋಲು ಉತ್ಸವಕ್ಕೆ ಮೆರಗು ನೀಡಿದ್ದವು.

ADVERTISEMENT

ರಥಕ್ಕೆ ಮಾಡಿದ್ದ ಹೂವಿನ ಅಲಂಕಾರ ಆಕರ್ಷಕವಾಗಿತ್ತು. ಬಲಿದಾನದ ನಂತರ ಭಕ್ತರು ದೇವರ ನಾಮ ಸ್ಮರಣೆ ಮಾಡುತ್ತಾ ರಥ ಎಳೆದರು. 

ಗೊಧೂಳಿ ಸಮಯದಲ್ಲಿ ಮುಳ್ಳು ಗದ್ದುಗೆ ಉತ್ಸವ, ಮಹೇಶ್ವರ ದೇವರ ಕೆಂಡ ಹಾಯುವುದು, ಮಣೇವು ಹಾಗೂ ಓಕಳಿಯಾಟ ಜರುಗಿತು. ಸುತ್ತಮುತ್ತಲ ಗ್ರಾಮಸ್ಥರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.