ADVERTISEMENT

ಹರಪನಹಳ್ಳಿ: ಚಿರತೆ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 3:11 IST
Last Updated 21 ಜೂನ್ 2021, 3:11 IST

ಹರಪನಹಳ್ಳಿ: ತಾಲ್ಲೂಕಿನ ಕಡತಿ, ವಟ್ಲಹಳ್ಳಿ ಸಮೀಪದಲ್ಲಿ ಕಂಡುಬಂದ ಚಿರತೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿರುವ ಗ್ರಾಮಸ್ಥರು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಗ್ರಾಮಗಳ ಸುತ್ತಮುತ್ತ ಎರಡು ದಿನಗಳ ಹಿಂದೆ ಚಿರತೆ ಕಂಡುಬಂದಿದ್ದು ಕೃಷಿ ಕೆಲಸಕ್ಕೆ ತೆರಳುವ ಜನರು ಆತಂಕಗೊಂಡಿದ್ದಾರೆ. ಈ ಹಿಂದೆಯೂ ಚಿರತೆ ಸಮೀಪದ ಹೊಲಗಳಲ್ಲಿ ದಾಳಿ ಮಾಡಿ, ಕುರಿ, ಮೇಕೆ ತಿಂದು ಹಾಕಿತ್ತು. ಆದಕಾರಣ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT